ಕೊಪ್ಪಳ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಡಾ.ಎಂ.ಎಂ.ಕಟ್ಟಿಮನಿ ₹ 2 ಸಾವಿರ ಲಂಚ ಪಡೆಯುವವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೂಕನಪಳ್ಳಿಯ ಬಸಪ್ಪ ಗುಳದಳ್ಳಿ ಎಂಬುವರು ಕ್ಯಾಟರಿಂಗ್ ವ್ಯಾಪಾರಕ್ಕಾಗಿ ಪರವಾನಗಿ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ ಕಟ್ಟಿಮನಿ ಅವರು ಕೆಲಸ ಮಾಡಿಕೊಡಲು ₹ 2 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಬಸಪ್ಪ ಅವರು ಹಣ ನೀಡುವ ಮುಂದೆ ದಾಳಿ ನಡೆಸಿದ ಎಸಿಬಿ ಅಧಿಕಾರಿ ರುದ್ರೇಶ ಉಜ್ಜನಕೊಪ್ಪ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.