<p><strong>ಅಳವಂಡಿ</strong>: ಕಂಪ್ಲಿ ಕ್ರಾಸ್–ಅಳವಂಡಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದೂಳಿನ ಮಜ್ಜನ ಸಾಮಾನ್ಯವಾಗಿದೆ.</p>.<p>ಈಗಾಗಲೇ ಅಳವಂಡಿಯಿಂದ ಬೆಳಗಟ್ಟಿವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಳವಂಡಿ ಗ್ರಾಮದ ಮುಖ್ಯ ರಸ್ತೆಯ ಮುಕ್ಕಾಲು ಭಾಗ ಸಿಸಿ ರಸ್ತೆ ಕಾಮಗಾರಿ ಮುಗಿದಿದೆ. ಸದ್ಯ ಕಂಪ್ಲಿ ಕ್ರಾಸ್ನಿಂದ ಅಳವಂಡಿ ನಡುವಿನ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ.</p>.<p>ಅಳವಂಡಿಯಿಂದ ಕಂಪ್ಲಿ ಕ್ರಾಸ್ವರೆಗೆ ರಸ್ತೆ ಅಗೆದು, ಜಲ್ಲಿಕಲ್ಲು ಹಾಕಲಾಗಿದೆ. ಜಲ್ಲಿಕಲ್ಲಿನ ಮೇಲೆ ವಾಹನಗಳು ಸಂಚರಿಸುವಾಗ ರಸ್ತೆ ಸಂಪೂರ್ಣ ದೂಳುಮಯವಾಗಿರುತ್ತದೆ. ನಿತ್ಯ ಕೊಪ್ಪಳದಿಂದ ಅಳವಂಡಿ ಗ್ರಾಮಕ್ಕೆ ಬರುವ ಸವಾರರನ್ನು ದೂಳು ಸ್ವಾಗತಿಸುತ್ತದೆ.</p>.<p>ಈ ರಸ್ತೆ ಮಧ್ಯೆ ಪ್ರೌಢಶಾಲೆ, ವಸತಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಶಾಲಾ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ಜನರು ಹಾಗೂ ಮುಂಡರಗಿ–ಕೊಪ್ಪಳ ನಗರಕ್ಕೆ ಪ್ರಯಾಣಿಸುವ ಜನರಿಗೆ ದೂಳಿನ ಸ್ನಾನ ಅನಿವಾರ್ಯವಾಗಿದೆ.</p>.<p>ಈ ರಸ್ತೆಯ ಪ್ರಯಾಣಿಕರ ಬಟ್ಟೆಗಳು ದೂಳಿನಲ್ಲಿ ಮಿಂದೇಳುತ್ತವೆ. ದೂಳಿನ ಬಟ್ಟೆ ತೊಟ್ಟು ವಿವಿಧ ಕಾರ್ಯಗಳಿಗೆ ಹೋಗಿ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.</p>.<p>‘ಮುಖ್ಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸದೇ, ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಕಿ, ಮೈ ಮರೆತಿದ್ದಾರೆ. ನಿತ್ಯ ಟ್ಯಾಂಕರ್ ಮೂಲಕ ರಸ್ತೆಗೆ ಐದಾರು ಬಾರಿ ನೀರು ಸಿಂಪಡಿಸಬೇಕು. ಆದರೆ, ತಮಗೆ ತಿಳಿದಾಗ ಮಾತ್ರ ರಸ್ತೆಗೆ ನೀರು ಸಿಂಪಡಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಕಾಮಗಾರಿ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದರೆ, ಕರೆ ಸ್ವೀಕರಿಸಲಿಲ್ಲ.</p>.<p><strong>‘ಶಾಸಕರು ಇತ್ತ ಗಮನಹರಿಸಲಿ’</strong></p><p>ಅಳವಂಡಿ ಹೋಬಳಿ ಕೇಂದ್ರವಾಗಿದ್ದು ಕೆಲಸದ ನಿಮಿತ್ತ ನಿತ್ಯ ಇಲ್ಲಿಗೆ ನೂರಾರು ಜನ ಹಾಗೂ ಶಾಲಾ–ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹಾಗೂ ದೂಳಿನ ಸಮಸ್ಯೆ ಕಾಡುತ್ತಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಈ ಬಗ್ಗೆ ಗಮನಹರಿಸಿ ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಜನ ಮನವಿ ಮಾಡಿದ್ದಾರೆ.</p>
<p><strong>ಅಳವಂಡಿ</strong>: ಕಂಪ್ಲಿ ಕ್ರಾಸ್–ಅಳವಂಡಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದೂಳಿನ ಮಜ್ಜನ ಸಾಮಾನ್ಯವಾಗಿದೆ.</p>.<p>ಈಗಾಗಲೇ ಅಳವಂಡಿಯಿಂದ ಬೆಳಗಟ್ಟಿವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಳವಂಡಿ ಗ್ರಾಮದ ಮುಖ್ಯ ರಸ್ತೆಯ ಮುಕ್ಕಾಲು ಭಾಗ ಸಿಸಿ ರಸ್ತೆ ಕಾಮಗಾರಿ ಮುಗಿದಿದೆ. ಸದ್ಯ ಕಂಪ್ಲಿ ಕ್ರಾಸ್ನಿಂದ ಅಳವಂಡಿ ನಡುವಿನ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ.</p>.<p>ಅಳವಂಡಿಯಿಂದ ಕಂಪ್ಲಿ ಕ್ರಾಸ್ವರೆಗೆ ರಸ್ತೆ ಅಗೆದು, ಜಲ್ಲಿಕಲ್ಲು ಹಾಕಲಾಗಿದೆ. ಜಲ್ಲಿಕಲ್ಲಿನ ಮೇಲೆ ವಾಹನಗಳು ಸಂಚರಿಸುವಾಗ ರಸ್ತೆ ಸಂಪೂರ್ಣ ದೂಳುಮಯವಾಗಿರುತ್ತದೆ. ನಿತ್ಯ ಕೊಪ್ಪಳದಿಂದ ಅಳವಂಡಿ ಗ್ರಾಮಕ್ಕೆ ಬರುವ ಸವಾರರನ್ನು ದೂಳು ಸ್ವಾಗತಿಸುತ್ತದೆ.</p>.<p>ಈ ರಸ್ತೆ ಮಧ್ಯೆ ಪ್ರೌಢಶಾಲೆ, ವಸತಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಶಾಲಾ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ಜನರು ಹಾಗೂ ಮುಂಡರಗಿ–ಕೊಪ್ಪಳ ನಗರಕ್ಕೆ ಪ್ರಯಾಣಿಸುವ ಜನರಿಗೆ ದೂಳಿನ ಸ್ನಾನ ಅನಿವಾರ್ಯವಾಗಿದೆ.</p>.<p>ಈ ರಸ್ತೆಯ ಪ್ರಯಾಣಿಕರ ಬಟ್ಟೆಗಳು ದೂಳಿನಲ್ಲಿ ಮಿಂದೇಳುತ್ತವೆ. ದೂಳಿನ ಬಟ್ಟೆ ತೊಟ್ಟು ವಿವಿಧ ಕಾರ್ಯಗಳಿಗೆ ಹೋಗಿ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.</p>.<p>‘ಮುಖ್ಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸದೇ, ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಕಿ, ಮೈ ಮರೆತಿದ್ದಾರೆ. ನಿತ್ಯ ಟ್ಯಾಂಕರ್ ಮೂಲಕ ರಸ್ತೆಗೆ ಐದಾರು ಬಾರಿ ನೀರು ಸಿಂಪಡಿಸಬೇಕು. ಆದರೆ, ತಮಗೆ ತಿಳಿದಾಗ ಮಾತ್ರ ರಸ್ತೆಗೆ ನೀರು ಸಿಂಪಡಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಕಾಮಗಾರಿ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದರೆ, ಕರೆ ಸ್ವೀಕರಿಸಲಿಲ್ಲ.</p>.<p><strong>‘ಶಾಸಕರು ಇತ್ತ ಗಮನಹರಿಸಲಿ’</strong></p><p>ಅಳವಂಡಿ ಹೋಬಳಿ ಕೇಂದ್ರವಾಗಿದ್ದು ಕೆಲಸದ ನಿಮಿತ್ತ ನಿತ್ಯ ಇಲ್ಲಿಗೆ ನೂರಾರು ಜನ ಹಾಗೂ ಶಾಲಾ–ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹಾಗೂ ದೂಳಿನ ಸಮಸ್ಯೆ ಕಾಡುತ್ತಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಈ ಬಗ್ಗೆ ಗಮನಹರಿಸಿ ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಜನ ಮನವಿ ಮಾಡಿದ್ದಾರೆ.</p>