ಬಿಜೆಪಿಯವರು ಹೇಳುತ್ತಾರೆ:
ಮುಖ್ಯಮಂತ್ರಿಯಾಗಲು ಸಿದ್ದು ನಾಲಾಯಕ್ಕು!
ಸಿದ್ದರಾಮಯ್ಯ ಹೇಳುತ್ತಾರೆ:
ಪ್ರಧಾನಿಯಾಗಲು ಮೋದಿ ನಾಲಾಯಕ್ಕು!
ಈ ‘ನಾಲಾಯಕ್ಕು’ಗಳ ನಡುವೆ
ಲಾಯಕ್ಕುಗಳಿಗಿಲ್ಲ ಸಿದ್ದು-ಮೋದಿಗಳ ಲಕ್ಕು!
ಇಂಥವರಿಗೆ ಅಧಿಕಾರ ಕೊಟ್ಟು
ಶ್ರೀಸಾಮಾನ್ಯನಿಗೆ ಕಾಣುತ್ತಿಲ್ಲ ದಿಕ್ಕು!
–ಎನ್.ನರಹರಿ, ಬೆಂಗಳೂರು
ಮಿತಿ ಮೀರದಿರಲಿ...
ಜನತಂತ್ರದ ಹಬ್ಬದಲ್ಲಿ ಮತದಾರರೇ ಕೇಂದ್ರಬಿಂದು. ರಾಜಕೀಯ ನಾಯಕರ ಮಾತುಗಳು, ವಿಚಾರಗಳು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಚಿಂತನ ಮಂಥನವಾಗಿರಬೇಕೇ ಹೊರತು, ಅವುಗಳಿಂದಲೇ ಅವರು ಕುಖ್ಯಾತಿ ಗಳಿಸುವಂತಾಗಬಾರದು.