ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅಂಜನಾದ್ರಿಯಲ್ಲಿ ನಾಳೆ ಹನುಮಾನ್‌ ಚಾಲೀಸ್‌ ಪಠಣ

Published 7 ಮೇ 2023, 9:14 IST
Last Updated 7 ಮೇ 2023, 9:14 IST
ಅಕ್ಷರ ಗಾತ್ರ

ಕೊಪ್ಪಳ: ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧದ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆಯೇ ಜಿಲ್ಲೆಯ ಹಲವು ಕಡೆ ಹನುಮಾನ್‌ ಚಾಲೀಸ್‌ ಪಠಣ ನಡೆಯುತ್ತಿದೆ. ಆದರೆ, ಇದೇ ಮೊದಲ ಸಲ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸಹಸ್ರ ಕಂಠಗಳಿಂದ ಹನುಮಾಲ್‌ ಚಾಲೀಸ್‌ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸೋಮವಾರ ಬೆಳಿಗ್ಗೆ 9 ಗಂಟೆಗೆ ಅಂಜನಾದ್ರಿಯಲ್ಲಿ ಸಹಸ್ರ ಕಂಠಗಳಿಂದ ಪಠಣ ಜರುಗಲಿದೆ ಎಂದು ಹನುಮ ಭಕ್ತರು ಕಾರ್ಯಕ್ರಮದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾವ ಸಂಘಟನೆಯ ಹೆಸರನ್ನೂ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ. ಪಠಣದ ಬಳಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಜಾಗೃತಿ ಭಾಷಣ ಮಾಡಲಿದ್ದು, ‘ಹನುಮನ ಭಕ್ತಿ ನಾಡಿಗೆ ಶಕ್ತಿ ಚಲೋ ಅಂಜನಾದ್ರಿ’ ಎಂದು ಸಂಘಟಕರು ಭಕ್ತರಿಗೆ ಕರೆ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT