<p>ಕುಕನೂರು: ತೀವ್ರ ಚಳಿಯಿಂದ ತಾಲ್ಲೂಕಿನ ತಳಕಲ್, ಇಟಗಿ, ನಿಂಗಾಪುರ, ಯೆರೇ ಹಂಚಿನಾಳ ಸೇರಿದಂತೆ ಇತರ ಗ್ರಾಮಗಳಲ್ಲಿನ ಹಿಂಗಾರಿನ ತೊಗರಿ, ಕಡಲೆ ಬೆಳೆಗೆ ನೆಟೆರೋಗ ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತದ ಆತಂಕ ಹೆಚ್ಚಾಗಿದೆ. </p>.<p>ತಳಕಲ್ ಗ್ರಾಮದ ರೈತ ತಿಮ್ಮಣ್ಣ ಚೌಡಿ ಅವರು 10 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಕಡಲೆಉತ್ತಮವಾಗಿ ಬೆಳೆದು ಕಾಯಿ ಬಿಡುವ ಹಂತದಲ್ಲಿದೆ. ನೆಟೆರೋಗದಿಂದ ಜಮೀನಿನಲ್ಲಿನ ಶೇ 50ರಷ್ಟು ಬೆಳೆ ಒಣಗುತ್ತಿದೆ. ಇದರಿಂದ ಏನು ಮಾಡಬೇಕು ಎಂದು ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಎಕರೆಗೆ ಬಿತ್ತನೆ, ಕಳೆ ನಾಶ, ಔಷಧಿ ಸಿಂಪಡಣೆ ಸೇರಿದಂತೆ ಇತರ ಖರ್ಚಿಗಾಗಿ ₹25 ಸಾವಿರ ವೆಚ್ಚವಾಗಿದೆ. ಈಗ ಪ್ರಕೃತಿ ವಿಕೋಪದಿಂದ ಬೆಳೆ ಒಣಗುತ್ತಿದೆ. ಮಾಡಿದ ಖರ್ಚಿನಷ್ಟೂ ಇಳುವರಿ ಬರುವುದೇ ಎಂಬ ಅನುಮಾನ’ ಎನ್ನುತ್ತಾರೆ ಕೃಷಿಕ ಸಂಗಮೇಶ.</p>.<p>ನೆಟೆ ಅಥವಾ ಸಿಡಿರೋಗ ಬಾಧಿತ ಕಡಲೆ ಒಣಗಿ ಹೋಗುತ್ತವೆ. ರೋಗ ಕಂಡ ಕೂಡಲೇ ಆ ಗಿಡವನ್ನು ಕಿತ್ತು ಹಾಕಬೇಕು. ಆ ಜಾಗದಲ್ಲಿ ಶೀಲಿಂಧ್ರನಾಶಕ ಕಾರ್ಬಂಡೈಜಿಮ್ ಅಥವಾ ಮ್ಯಾಂಕೋಜಿಬ್ ಅನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬೆರೆಸಿ ಸಿಂಪಡಿಸಬೇಕು. ಕಾಯಿ ಬಿಟ್ಟಿರುವ ಕಡಲೆಗೆ ಶೇ2ರಷ್ಟು ಯೂರಿಯಾ ಅಥವಾ ನೀರಿನಲ್ಲಿ ಕರಗುವ ಗೊಬ್ಬರ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ರೈತ ಸಂಪರ್ಕ ಕೇಂದ್ರದ ಬಸವರಾಜ ಸಲಹೆ ನೀಡಿದರು.</p>.<p>ರೈತರು ಎರಡು ವರ್ಷಗಳಿಂದ ಅನಾವೃಷ್ಟಿಯಿಂದ ಕಂಗಾಲಾಗಿದ್ದಾರೆ. ಸಕಾಲಕ್ಕೆ ಯಾವುದೇ ಬೆಳೆ ವಿಮೆ ಮಂಜೂರಾಗಿಲ್ಲ. ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಶೀಘ್ರವೇ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಇಟಗಿ ಗ್ರಾಮದ ರೈತ ಮುಖಂಡ ಸಿದ್ದನಗೌಡ ಅವರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಕನೂರು: ತೀವ್ರ ಚಳಿಯಿಂದ ತಾಲ್ಲೂಕಿನ ತಳಕಲ್, ಇಟಗಿ, ನಿಂಗಾಪುರ, ಯೆರೇ ಹಂಚಿನಾಳ ಸೇರಿದಂತೆ ಇತರ ಗ್ರಾಮಗಳಲ್ಲಿನ ಹಿಂಗಾರಿನ ತೊಗರಿ, ಕಡಲೆ ಬೆಳೆಗೆ ನೆಟೆರೋಗ ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತದ ಆತಂಕ ಹೆಚ್ಚಾಗಿದೆ. </p>.<p>ತಳಕಲ್ ಗ್ರಾಮದ ರೈತ ತಿಮ್ಮಣ್ಣ ಚೌಡಿ ಅವರು 10 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಕಡಲೆಉತ್ತಮವಾಗಿ ಬೆಳೆದು ಕಾಯಿ ಬಿಡುವ ಹಂತದಲ್ಲಿದೆ. ನೆಟೆರೋಗದಿಂದ ಜಮೀನಿನಲ್ಲಿನ ಶೇ 50ರಷ್ಟು ಬೆಳೆ ಒಣಗುತ್ತಿದೆ. ಇದರಿಂದ ಏನು ಮಾಡಬೇಕು ಎಂದು ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಎಕರೆಗೆ ಬಿತ್ತನೆ, ಕಳೆ ನಾಶ, ಔಷಧಿ ಸಿಂಪಡಣೆ ಸೇರಿದಂತೆ ಇತರ ಖರ್ಚಿಗಾಗಿ ₹25 ಸಾವಿರ ವೆಚ್ಚವಾಗಿದೆ. ಈಗ ಪ್ರಕೃತಿ ವಿಕೋಪದಿಂದ ಬೆಳೆ ಒಣಗುತ್ತಿದೆ. ಮಾಡಿದ ಖರ್ಚಿನಷ್ಟೂ ಇಳುವರಿ ಬರುವುದೇ ಎಂಬ ಅನುಮಾನ’ ಎನ್ನುತ್ತಾರೆ ಕೃಷಿಕ ಸಂಗಮೇಶ.</p>.<p>ನೆಟೆ ಅಥವಾ ಸಿಡಿರೋಗ ಬಾಧಿತ ಕಡಲೆ ಒಣಗಿ ಹೋಗುತ್ತವೆ. ರೋಗ ಕಂಡ ಕೂಡಲೇ ಆ ಗಿಡವನ್ನು ಕಿತ್ತು ಹಾಕಬೇಕು. ಆ ಜಾಗದಲ್ಲಿ ಶೀಲಿಂಧ್ರನಾಶಕ ಕಾರ್ಬಂಡೈಜಿಮ್ ಅಥವಾ ಮ್ಯಾಂಕೋಜಿಬ್ ಅನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬೆರೆಸಿ ಸಿಂಪಡಿಸಬೇಕು. ಕಾಯಿ ಬಿಟ್ಟಿರುವ ಕಡಲೆಗೆ ಶೇ2ರಷ್ಟು ಯೂರಿಯಾ ಅಥವಾ ನೀರಿನಲ್ಲಿ ಕರಗುವ ಗೊಬ್ಬರ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ರೈತ ಸಂಪರ್ಕ ಕೇಂದ್ರದ ಬಸವರಾಜ ಸಲಹೆ ನೀಡಿದರು.</p>.<p>ರೈತರು ಎರಡು ವರ್ಷಗಳಿಂದ ಅನಾವೃಷ್ಟಿಯಿಂದ ಕಂಗಾಲಾಗಿದ್ದಾರೆ. ಸಕಾಲಕ್ಕೆ ಯಾವುದೇ ಬೆಳೆ ವಿಮೆ ಮಂಜೂರಾಗಿಲ್ಲ. ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಶೀಘ್ರವೇ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಇಟಗಿ ಗ್ರಾಮದ ರೈತ ಮುಖಂಡ ಸಿದ್ದನಗೌಡ ಅವರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>