ಸರ್ಕಾರ ಕೃಷಿಕರಿಗಾಗಿ ಸಾಕಷ್ಟು ಸೌಲಭ್ಯ ನೀಡುತ್ತಿದೆ. ಅವುಗಳ ಸದುಪಯೋಗ ಪಡೆದು ಕೊಳ್ಳಬೇಕು. ಕೃಷಿ ಮಾಡುವ ರೈತರು ಕೃಷಿ ಇಲಾಖೆ ಸೇರಿ, ಅನುಭವಿಗಳ ಮಾರ್ಗದರ್ಶನ, ಸಹಾಯ, ಸಹಕಾರ ಪಡೆದು ಉಳಿಮೆ ಮಾಡಿದರೇ ಸಾಲ, ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಆ ಕಾರಣಕ್ಕಾಗಿ ರೈತರು ಇರುವ ಭೂಮಿಯಲ್ಲಿ ಬುದ್ಧಿವಂತಿಕೆಯಿಂದ ಕೃಷಿ ಮಾಡಬೇಕು ಎಂದರು.