<p><strong>ಗಂಗಾವತಿ: </strong>ವಾರಾಂತ್ಯದ ಕರ್ಫ್ಯೂಗೆ ಎರಡನೆ ದಿನ ಭಾನುವಾರ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ನಗರದಲ್ಲಿ ಶನಿವಾರ ಕರ್ಫ್ಯೂಗೆ ಕೆಲ ಅಂಗಡಿಗಳು ತೆರದಿದ್ದರೇ, ಭಾನುವಾರ ಮಾತ್ರ ಶೇ 80ರಷ್ಟು ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.</p>.<p>ಎಲ್ಲ ವೃತ್ತಗಳಲ್ಲಿ ಜನ ಸಂಚಾರ ಸಹಜವಾಗಿಯೇ ಇತ್ತು. ಕೆಲ ಯುವಕರು ಮನೆಯಲ್ಲಿರಲು ಆಗದೆ, ಬಲವಂತವಾಗಿ, ಹೊರಗಡೆ ಬಂದಂತೆ ಕಾಣುತ್ತಿತ್ತು. ಇನ್ನೂ ಶಾಲೆ ರಜೆ ಇರುವ ಕಾರಣ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳು ಕಂಡು ಬಂದವು.</p>.<p>ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ಗುಂಡಮ್ಮ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಪರವಾಗಿಲ್ಲ ಅನ್ನುವಂತಿತ್ತು. ಮೊದಲ ದಿನ ವ್ಯಾಪಾರ ಆಗದ ಕಾರಣ ಕಿರಾಣಿ ಅಂಗಡಿ, ಹೊಟೇಲ್ ಮುಚ್ಚಲಾಗಿತ್ತು. ಇನ್ನೂ ತಳ್ಳುಗಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ರಸ್ತೆಗೆ ಇಳಿಯಲಿಲ್ಲ.</p>.<p>ನಗರದ ಗಾಂಧಿ ವೃತ್ತ, ಮಹಾವೀರ ವೃತ್ತ, ಚನ್ನಬಸವ ಸರ್ಕಲ್, ಲತಿಫಿಯಾ ವೃತ್ತಗಳಲ್ಲಿನ ವಾಣಿಜ್ಯ ಮಳಿಗೆಗಳು ಎಲ್ಲವು ಸಂಪೂರ್ಣ ಬಂದ್ ಮಾಡಲಾಗಿತ್ತು. ಹಣ್ಣು, ಹೂವಿನ ವ್ಯಾಪಾರಿಗಳು ಅಂಗಡಿ ಮಳಿಗೆಗಳನ್ನು ತೆರೆದರೂ ಗ್ರಾಹಕರಿಲ್ಲದೆ ವ್ಯಾಪಾರ ನೀರಸವಾಗಿತ್ತು.</p>.<p>ಎರಡನೇ ದಿನವೂ ಸಹ ಪ್ರಯಾಣಿಕರಿಲ್ಲದೆ ದೂರದ ಮಾರ್ಗಗಳ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಸ್ಥಳೀಯವಾಗಿ ಹೊಸಪೇಟೆ, ಕನಕಗಿರಿ, ಕಾರಟಗಿ, ಸಿಂಧನೂರ,ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗಗಳ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಪ್ರಯಾಣಿಕರ ಕೊರತೆ ಕಂಡು ಬಂದಿತು.</p>.<p>ತುರ್ತು ಸೇವೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ಆಟೋಗಳು ನಗರದಲ್ಲಿ ಸಂಚಾರ ಮಾಡಿದರೆ, ದ್ವಿಚಕ್ರ ವಾಹನಗಳು, ಕಾರುಗಳು ಸಂಚಾರ ನಡೆಸಿದರು. ಕೆಲ ಸ್ಥಳಗಳಲ್ಲಿ ಪೋಲಿಸ್ ಸಿಬ್ಬಂದಿ ವಾಹನ ಸವಾರರನ್ನು ತಡೆ ತಪಾಸಣೆ ಮಾಡಿದರು. ಕೆಲವರಿಗೆ ದಂಡ ಸಹ ಹಾಕಲಾಯಿತು.</p>.<p>ಎರಡನೇ ದಿನವು ಸಹ ಅಂಜನಾದ್ರಿ, ಪಂಪಾಸರೋವರ, ದುರ್ಗಾದೇವಿ, ನವವೃಂದಾವನ ದೇವಸ್ಥಾನಗಳು ಬಂದ್ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ಪರಿಣಾಮ ಅಷ್ಟೇನೂ ಕಂಡು ಬರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ವಾರಾಂತ್ಯದ ಕರ್ಫ್ಯೂಗೆ ಎರಡನೆ ದಿನ ಭಾನುವಾರ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು. ನಗರದಲ್ಲಿ ಶನಿವಾರ ಕರ್ಫ್ಯೂಗೆ ಕೆಲ ಅಂಗಡಿಗಳು ತೆರದಿದ್ದರೇ, ಭಾನುವಾರ ಮಾತ್ರ ಶೇ 80ರಷ್ಟು ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.</p>.<p>ಎಲ್ಲ ವೃತ್ತಗಳಲ್ಲಿ ಜನ ಸಂಚಾರ ಸಹಜವಾಗಿಯೇ ಇತ್ತು. ಕೆಲ ಯುವಕರು ಮನೆಯಲ್ಲಿರಲು ಆಗದೆ, ಬಲವಂತವಾಗಿ, ಹೊರಗಡೆ ಬಂದಂತೆ ಕಾಣುತ್ತಿತ್ತು. ಇನ್ನೂ ಶಾಲೆ ರಜೆ ಇರುವ ಕಾರಣ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳು ಕಂಡು ಬಂದವು.</p>.<p>ಬೆಳಿಗ್ಗೆ 10 ರಿಂದ 1 ಗಂಟೆಯ ವರೆಗೆ ಗುಂಡಮ್ಮ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಪರವಾಗಿಲ್ಲ ಅನ್ನುವಂತಿತ್ತು. ಮೊದಲ ದಿನ ವ್ಯಾಪಾರ ಆಗದ ಕಾರಣ ಕಿರಾಣಿ ಅಂಗಡಿ, ಹೊಟೇಲ್ ಮುಚ್ಚಲಾಗಿತ್ತು. ಇನ್ನೂ ತಳ್ಳುಗಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ರಸ್ತೆಗೆ ಇಳಿಯಲಿಲ್ಲ.</p>.<p>ನಗರದ ಗಾಂಧಿ ವೃತ್ತ, ಮಹಾವೀರ ವೃತ್ತ, ಚನ್ನಬಸವ ಸರ್ಕಲ್, ಲತಿಫಿಯಾ ವೃತ್ತಗಳಲ್ಲಿನ ವಾಣಿಜ್ಯ ಮಳಿಗೆಗಳು ಎಲ್ಲವು ಸಂಪೂರ್ಣ ಬಂದ್ ಮಾಡಲಾಗಿತ್ತು. ಹಣ್ಣು, ಹೂವಿನ ವ್ಯಾಪಾರಿಗಳು ಅಂಗಡಿ ಮಳಿಗೆಗಳನ್ನು ತೆರೆದರೂ ಗ್ರಾಹಕರಿಲ್ಲದೆ ವ್ಯಾಪಾರ ನೀರಸವಾಗಿತ್ತು.</p>.<p>ಎರಡನೇ ದಿನವೂ ಸಹ ಪ್ರಯಾಣಿಕರಿಲ್ಲದೆ ದೂರದ ಮಾರ್ಗಗಳ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಸ್ಥಳೀಯವಾಗಿ ಹೊಸಪೇಟೆ, ಕನಕಗಿರಿ, ಕಾರಟಗಿ, ಸಿಂಧನೂರ,ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗಗಳ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದರು. ಪ್ರಯಾಣಿಕರ ಕೊರತೆ ಕಂಡು ಬಂದಿತು.</p>.<p>ತುರ್ತು ಸೇವೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲ ಆಟೋಗಳು ನಗರದಲ್ಲಿ ಸಂಚಾರ ಮಾಡಿದರೆ, ದ್ವಿಚಕ್ರ ವಾಹನಗಳು, ಕಾರುಗಳು ಸಂಚಾರ ನಡೆಸಿದರು. ಕೆಲ ಸ್ಥಳಗಳಲ್ಲಿ ಪೋಲಿಸ್ ಸಿಬ್ಬಂದಿ ವಾಹನ ಸವಾರರನ್ನು ತಡೆ ತಪಾಸಣೆ ಮಾಡಿದರು. ಕೆಲವರಿಗೆ ದಂಡ ಸಹ ಹಾಕಲಾಯಿತು.</p>.<p>ಎರಡನೇ ದಿನವು ಸಹ ಅಂಜನಾದ್ರಿ, ಪಂಪಾಸರೋವರ, ದುರ್ಗಾದೇವಿ, ನವವೃಂದಾವನ ದೇವಸ್ಥಾನಗಳು ಬಂದ್ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕರ್ಫ್ಯೂ ಪರಿಣಾಮ ಅಷ್ಟೇನೂ ಕಂಡು ಬರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>