ಸ್ವರ್ಧಾತ್ಮಕ ಯುಗದಲ್ಲಿ ಅಂಕಗಳು ಬೇಕೇಬೇಕು. ಆದರೆ ಅದು ಪ್ರಧಾನ ವಾಗುವುದರಿಂದ ಮಕ್ಕಳಲ್ಲಿ ಇರುವ ಪ್ರತಿಭೆ ಕಮರಿ ಹೋಗಬಹುದು. ಆದ್ದರಿಂದ ಮಕ್ಕಳು ಮುಕ್ತ ಮನಸ್ಸಿನಿಂದ ಕಲಿಯುವಂತೆ ಆಗಬೇಕೆ ವಿನಃ ಒತ್ತಾಯ ಪೂರ್ವಕ ಕಲಿಕೆಯಾಗಬಾರದು. ಮಕ್ಕಳಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಆದರೆ, ಹೆಚ್ಚು ಅಂಕಗಗಳನ್ನು ಬೆನ್ನಟ್ಟುವ ಭರದಲ್ಲಿ ಪ್ರತಿಭೆ ಬಾಡಿ ಹೋಗಬಾರದು. ಹೀಗಾಗಿ, ಶಿಕ್ಷಣ ಸಂಸ್ಥೆಗಳ ಹೆಚ್ಚು ಅಂಕ ಪಡೆಯುವುದಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಮೌಲ್ಯಾಧಾರಿತ ಶಿಕ್ಷಣ ನೀಡುವುದಕ್ಕೂ ನೀಡಬೇಕು ಎಂದರು.