ಕಿರಿಯ ಎಂಜಿನಿಯರ್ ಎಂ. ಇಲಿಯಾಸ್ ಸೇರಿ ಸಹಾಯಕ ಎಂಜಿನಿಯರ್ ಅಜಿತ್ ದಳವಾಯಿ, ಕಿರಿಯ ಎಂಜಿನಿಯರ್ ಕವಿತಾ, ರಿಜ್ವಾನ್, ಆಶ್ವಿನಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳಾದ ಶಂಕರ್ ಮಳಗಿ, ಶಿವಾನಂದ ನಾಗೋಡ್ ಎಂಬುವವರ ವಿರುದ್ಧ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ.ತಿಮ್ಮಪ್ಪ ದೂರು ನೀಡಿದ್ದಾರೆ. ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಗರಣವನ್ನು ಪ್ರಜಾವಾಣಿ ಬಯಲಿಗೆ ತಂದಿತ್ತು.