ಈಳಿಗನೂರ (ಕಾರಟಗಿ): ಗ್ರಾಮದಲ್ಲಿ ಶರಣಬಸವೇಶ್ವರರ ಪುರಾಣ ಮಂಗಲೋತ್ಸವ ಮತ್ತು ಮಾರುತೇಶ್ವರ ರಥೋತ್ಸವ ನಡೆಯುವ ಕಾರಣ ಭಾನುವಾರ ರಥ ಹಾಗೂ ಉಚ್ಛಾಯ ಹೊರ ತೆಗೆಯಲಾಯಿತು.
ಡಿ. 8ರಂದು ಶರಣಬಸವೇಶ್ವರರ ಪುರಾಣ ಮಂಗಲೋತ್ಸವ, 9ರಂದು ಮಾರುತೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ನಡೆಯಲಿದ್ದು, ಸಂಜೆ ಕಾರ್ತಿಕ ದೀಪೋತ್ಸವ, 10ರಂದು ಬೆಳಿಗ್ಗೆ ಉಚ್ಛಾಯ, ಅನ್ನಸಂತರ್ಪಣೆ ಹಾಗೂ ಸಂಜೆ ಮಾರುತೇಶ್ವರ ರಥೋತ್ಸವ ಜರುಗಲಿದೆ.
ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮಾರುತೇಶ್ವರ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.