<p><strong>ಹನುಮಸಾಗರ: </strong>ಸುತ್ತಲಿನ ಗ್ರಾಮಗಳಾದ ಬಾದಿಮನಾಳ, ಜ್ಯಾಗೀರ ತಿಮ್ಮನಟ್ಟಿ, ವೆಂಕಟಾಪೂರ, ಗೊರೆಬಾಳ, ತುಮರಿಕೊಪ್ಪ ಭಾಗದ ರೈತರು, ನೀರಾವರಿ ಪಂಪ್ಸೆಟ್ಗಳಿಗೆ (ಐ.ಪಿ. ಸೆಟ್) ವಿದ್ಯುತ್ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಇಲ್ಲಿನ ಜೆಸ್ಕಾಂ ಶಾಖಾ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.</p>.<p>ಬೆಳೆಗಳಿಗೆ ನೀರು ಒದಗಿಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ವಿದ್ಯುತ್ ಪೂರೈಕೆ ಸುಧಾರಣೆಯಾಗಿಲ್ಲ. ದಿನಕ್ಕೆ 7 ತಾಸು ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.</p>.<p>ವಾರಿಕಲ್ ಒನ್ಟೆನ್ ಸ್ಟೇಷನ್ನಿಂದ ಬಾದಿಮನಾಳ ಕ್ರಾಸ್ವರೆಗಿನ ವಿದ್ಯುತ್ ತಂತಿ ಹಳೆಯದಾಗಿದೆ. ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದರು.</p>.<p>ಜನ ಕಲ್ಯಾಣ ವೇದಿಕೆ ಅಧ್ಯಕ್ಷ ದೇವಪ್ಪ ಮೆಣಸಗಿ, ರೈತ ಸಂಘದ ಪ್ರಮುಖರಾದ ಯಮನೂರಪ್ಪ ಮಡಿವಾಳರ, ಬಸವರಾಜ ಮೋಟಗಿ, ಸಿರಾಜುದ್ದೀನ್ ಮೂಲಿಮನಿ, ಅಹ್ಮದ್ ಮುದಗಲ್, ರಾಮಪ್ಪ ವಾಲಿಕಾರ, ಶರಣಯ್ಯ ಸಾರಂಗಮಠ, ಮುತ್ತಪ್ಪ ವಾಲಿಕಾರ, ಮಲ್ಲಪ್ಪ ಬ್ಯಾಳಿ ಹಾಗೂ ಮಂಜಪ್ಪ ಪೂಜಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ: </strong>ಸುತ್ತಲಿನ ಗ್ರಾಮಗಳಾದ ಬಾದಿಮನಾಳ, ಜ್ಯಾಗೀರ ತಿಮ್ಮನಟ್ಟಿ, ವೆಂಕಟಾಪೂರ, ಗೊರೆಬಾಳ, ತುಮರಿಕೊಪ್ಪ ಭಾಗದ ರೈತರು, ನೀರಾವರಿ ಪಂಪ್ಸೆಟ್ಗಳಿಗೆ (ಐ.ಪಿ. ಸೆಟ್) ವಿದ್ಯುತ್ ತೊಂದರೆಯಾಗುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಇಲ್ಲಿನ ಜೆಸ್ಕಾಂ ಶಾಖಾ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.</p>.<p>ಬೆಳೆಗಳಿಗೆ ನೀರು ಒದಗಿಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ವಿದ್ಯುತ್ ಪೂರೈಕೆ ಸುಧಾರಣೆಯಾಗಿಲ್ಲ. ದಿನಕ್ಕೆ 7 ತಾಸು ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದರು.</p>.<p>ವಾರಿಕಲ್ ಒನ್ಟೆನ್ ಸ್ಟೇಷನ್ನಿಂದ ಬಾದಿಮನಾಳ ಕ್ರಾಸ್ವರೆಗಿನ ವಿದ್ಯುತ್ ತಂತಿ ಹಳೆಯದಾಗಿದೆ. ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದರು.</p>.<p>ಜನ ಕಲ್ಯಾಣ ವೇದಿಕೆ ಅಧ್ಯಕ್ಷ ದೇವಪ್ಪ ಮೆಣಸಗಿ, ರೈತ ಸಂಘದ ಪ್ರಮುಖರಾದ ಯಮನೂರಪ್ಪ ಮಡಿವಾಳರ, ಬಸವರಾಜ ಮೋಟಗಿ, ಸಿರಾಜುದ್ದೀನ್ ಮೂಲಿಮನಿ, ಅಹ್ಮದ್ ಮುದಗಲ್, ರಾಮಪ್ಪ ವಾಲಿಕಾರ, ಶರಣಯ್ಯ ಸಾರಂಗಮಠ, ಮುತ್ತಪ್ಪ ವಾಲಿಕಾರ, ಮಲ್ಲಪ್ಪ ಬ್ಯಾಳಿ ಹಾಗೂ ಮಂಜಪ್ಪ ಪೂಜಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>