ಅನೇಕರ ಹೋರಾಟದ ಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ದೇಶಾಭಿಮಾನ, ದೇಶದ ಒಳಿತಿನ ಬಗ್ಗೆ, ಅಭಿವೃದ್ಧಿಯ ಬಗ್ಗೆ, ದೇಶದ ಸಂಪತ್ತನ್ನು ದೇಶದಲ್ಲಿಯೇ ಉಳಿಸುವ ಬಗ್ಗೆ ಅವರಿಗಿದ್ದ ಅಪಾರ ಶ್ರದ್ಧೆ, ಆಸಕ್ತಿಯನ್ನು, ಆದರ್ಶ, ತತ್ವಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ನಮ್ಮ ದೇಶ ಸ್ವತಂತ್ರವಾಗಿದ್ದು, ಅಭಿವೃದ್ಧಿ ಕಡೆ ಸಾಗುತ್ತಿದೆ. ಯುವಕರು ಅದಕ್ಕೆ ಪೂರಕವಾಗಿ ತಮ್ಮ ಜೀವನಶೈಲಿ ಬದಲಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು. ದೇಶದ ಏಕತೆ, ಘನತೆಯನ್ನು ಕಾಪಾಡುವ ಕೆಲಸವಾಗಬೇಕು ಎಂದು ಅವರು ಹೇಳಿದರು.