<p><strong>ಕೊಪ್ಪಳ: </strong>ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ಕು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.</p>.<p>ಕಾರಟಗಿ ತಾಲ್ಲೂಕಿನ ತಿಮ್ಮಾಪುರದಲ್ಲಿ ರೋಗಿ ಸಂಖ್ಯೆ– 5835 ನ ಪ್ರಾಥಮಿಕ ಸಂಪರ್ಕ ಹೊಂದಿದ್ದ 29 ವರ್ಷದ ಮಹಿಳೆಗೆ ಸೋಂಕು ಧೃಢಪಟ್ಟಿದೆ. ಗಂಗಾವತಿ ತಾಲ್ಲೂಕಿನಲ್ಲಿ ಮೂರು ಸೋಕಿನ ಪ್ರಕರಣಗಳು ಪತ್ತೆಯಾಗಿವೆ.</p>.<p>ಹೊರ ರಾಜ್ಯ ಹಾಗೂ ಬಳ್ಳಾರಿ ಜಿಲ್ಲೆಯ ಜಿಂದಾಲ್ನಿಂದ ಆಗಮಿಸಿರುವ ಒಟ್ಟು 176 ಜನರನ್ನು ಜಿಲ್ಲಾಡಳಿತದಿಂದ ಈವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.</p>.<p>ಮಹಾರಾಷ್ಟ್ರದಿಂದ ಆಗಮಿಸಿದ 152, ರಾಜಸ್ಥಾನದ 8, ಗುಜರಾತಿನ 1 ಜಿಂದಾಲ್ನ 12 ಮತ್ತು ಪ್ರಾಥಮಿಕ ಸಂಪರ್ಕದಲ್ಲಿದ್ದ 3 ಜನ ಸೇರಿದಂತೆ 176 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊಪ್ಪಳ ನಗರದ ಹರ್ಷಾ ಇಂಟರ್ನ್ಯಾಷನಲ್ ಲಾಡ್ಜ್ನಲ್ಲಿ 9, ಲಕ್ಷ್ಮೀ ನಾರಾಯಣ ರೆಸಿಡೆನ್ಸಿಯಲ್ಲಿ 2 ಮತ್ತು ತಾಲ್ಲೂಕಿನ ಟಣಕನಕಲ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ಜನರನ್ನು ಪ್ರತ್ಯೇಕಿಸಿ ಇಡಲಾಗಿದೆ.</p>.<p>ಗಂಗಾವತಿ ತಾಲ್ಲೂಕಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 1, ಪಾರ್ಥ ಲಾಡ್ಜ್ನಲ್ಲಿ 10, ಬಸಾಪಟ್ಟಣದ ಬಿಸಿಎಂ ಹಾಸ್ಟೆಲ್ನಲ್ಲಿ 5 (3 ಪ್ರಾಥಮಿಕ ಸಂಪರ್ಕಿತರು), ಹೊಸಳ್ಳಿ ಬಿಸಿಎಂನಲ್ಲಿ 10, ಹೇಮಗುಡ್ಡದಲ್ಲಿ 20, ತಾಲ್ಲೂಕಿನ ಕನಕಗಿರಿಯಲ್ಲಿ 2, ಕುಷ್ಟಗಿಯ ಕಾಟಾಪುರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 17, ಯಲಬುರ್ಗಾದಲ್ಲಿ 6, ಕುದರಿಮೋತಿಯಲ್ಲಿ 4 ಹಾಗೂ ಕುಕನೂರಿನಮೊರಾರ್ಜಿ ದೇಸಾಯಿ ಶಾಲೆಯಲ್ಲಿ 75 ಜನ ಸೇರಿದಂತೆ ಒಟ್ಟು 176 ಜನರನ್ನು ದಿಗ್ಭಂಧನದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ಕು ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿವೆ.</p>.<p>ಕಾರಟಗಿ ತಾಲ್ಲೂಕಿನ ತಿಮ್ಮಾಪುರದಲ್ಲಿ ರೋಗಿ ಸಂಖ್ಯೆ– 5835 ನ ಪ್ರಾಥಮಿಕ ಸಂಪರ್ಕ ಹೊಂದಿದ್ದ 29 ವರ್ಷದ ಮಹಿಳೆಗೆ ಸೋಂಕು ಧೃಢಪಟ್ಟಿದೆ. ಗಂಗಾವತಿ ತಾಲ್ಲೂಕಿನಲ್ಲಿ ಮೂರು ಸೋಕಿನ ಪ್ರಕರಣಗಳು ಪತ್ತೆಯಾಗಿವೆ.</p>.<p>ಹೊರ ರಾಜ್ಯ ಹಾಗೂ ಬಳ್ಳಾರಿ ಜಿಲ್ಲೆಯ ಜಿಂದಾಲ್ನಿಂದ ಆಗಮಿಸಿರುವ ಒಟ್ಟು 176 ಜನರನ್ನು ಜಿಲ್ಲಾಡಳಿತದಿಂದ ಈವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.</p>.<p>ಮಹಾರಾಷ್ಟ್ರದಿಂದ ಆಗಮಿಸಿದ 152, ರಾಜಸ್ಥಾನದ 8, ಗುಜರಾತಿನ 1 ಜಿಂದಾಲ್ನ 12 ಮತ್ತು ಪ್ರಾಥಮಿಕ ಸಂಪರ್ಕದಲ್ಲಿದ್ದ 3 ಜನ ಸೇರಿದಂತೆ 176 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊಪ್ಪಳ ನಗರದ ಹರ್ಷಾ ಇಂಟರ್ನ್ಯಾಷನಲ್ ಲಾಡ್ಜ್ನಲ್ಲಿ 9, ಲಕ್ಷ್ಮೀ ನಾರಾಯಣ ರೆಸಿಡೆನ್ಸಿಯಲ್ಲಿ 2 ಮತ್ತು ತಾಲ್ಲೂಕಿನ ಟಣಕನಕಲ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ಜನರನ್ನು ಪ್ರತ್ಯೇಕಿಸಿ ಇಡಲಾಗಿದೆ.</p>.<p>ಗಂಗಾವತಿ ತಾಲ್ಲೂಕಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 1, ಪಾರ್ಥ ಲಾಡ್ಜ್ನಲ್ಲಿ 10, ಬಸಾಪಟ್ಟಣದ ಬಿಸಿಎಂ ಹಾಸ್ಟೆಲ್ನಲ್ಲಿ 5 (3 ಪ್ರಾಥಮಿಕ ಸಂಪರ್ಕಿತರು), ಹೊಸಳ್ಳಿ ಬಿಸಿಎಂನಲ್ಲಿ 10, ಹೇಮಗುಡ್ಡದಲ್ಲಿ 20, ತಾಲ್ಲೂಕಿನ ಕನಕಗಿರಿಯಲ್ಲಿ 2, ಕುಷ್ಟಗಿಯ ಕಾಟಾಪುರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 17, ಯಲಬುರ್ಗಾದಲ್ಲಿ 6, ಕುದರಿಮೋತಿಯಲ್ಲಿ 4 ಹಾಗೂ ಕುಕನೂರಿನಮೊರಾರ್ಜಿ ದೇಸಾಯಿ ಶಾಲೆಯಲ್ಲಿ 75 ಜನ ಸೇರಿದಂತೆ ಒಟ್ಟು 176 ಜನರನ್ನು ದಿಗ್ಭಂಧನದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>