ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ– ದರೋಜಿ ಬ್ರಾಡ್‌ಗೇಜ್ ನಿರ್ಮಿಸಿ

ಸಂಸತ್ತಿನಲ್ಲಿ ಸಂಸದ ಸಂಗಣ್ಣ ಕರಡಿ ವಿಷಯ ಮಂಡನೆ
Last Updated 18 ಸೆಪ್ಟೆಂಬರ್ 2020, 6:28 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿಯಿಂದ ದರೋಜಿವರೆಗಿನ 35 ಕಿ.ಮೀ. ಅಂತರದ ರೈಲ್ವೇ ಬ್ರಾಡ್‌ಗೇಜ್ ಲೈನ್ ನಿರ್ಮಿಸಬೇಕು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಸಂಸತ್ತಿನಲ್ಲಿ ಬುಧವಾರ ಗಂಗಾವತಿ-ದರೋಜಿ ಹೊಸ ರೈಲ್ವೇ ಬ್ರಾಡ್‌ಗೇಜ್ ಲೈನ್ ನಿರ್ಮಿಸುವಂತೆ ವಿಷಯ ಮಂಡನೆ ಮಾಡಿದರು.

ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿ ವರೆಗೆ 35 ಕಿ.ಮೀ ಅಂತರವಿದ್ದು, ಇಲ್ಲಿ ರೈಲ್ವೆ ಬ್ರಾಡ್‌ಗೇಜ್ ನಿರ್ಮಿಸುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಗಂಗಾವತಿಯು ಹೆಚ್ಚು ಭತ್ತ ಬೆಳೆಯುವ ಪ್ರದೇಶವಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಭತ್ತ ಬೆಳೆಯುವುದರ ಜತೆಗೆ ಹಲವಾರು ರೈಸ್ ಮಿಲ್‌ಗಳು ಇವೆ. ಅಲ್ಲದೇ ಆನೆಗೊಂದಿ ಪ್ರದೇಶವು ಹನುಮಂತ ದೇವರು ಜನಿಸಿದ ನಾಡಾಗಿದೆ. ದೇಶ-ವಿದೇಶಗಳಿಂದ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಈ ಭಾಗದ ಭತ್ತದ ವ್ಯಾಪಾರದ ವಾಣಿಜ್ಯೋದ್ಯಮಕ್ಕೂ ಕೂಡ ಅನುಕೂಲವಾಗಲಿದೆ ಎಂದು ಹೇಳಿದರು.

ದರೋಜಿಯು ಕೂಡ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ದರೋಜಿಯಿಂದ ಬಳ್ಳಾರಿ ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸಿದರೆ ಗಂಗಾವತಿಯಿಂದ ರಾಯಚೂರು, ಮುನಿರಾಬಾದ್ ಹಾಗೂ ಮೆಹಬೂಬ್‌ನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ ಎಂದು ಸಂಸದ ಕರಡಿ ಸಂಗಣ್ಣನವರು ಸಂಸತ್ತಿನಲ್ಲಿ ವಿಷಯ ಮಂಡನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT