ಮೂರು ವರ್ಷಗಳಿಂದ ಗಂಗಾವತಿ ಅಭಿವೃದ್ಧಿ ಕುಂಠಿತವಾಗಿದೆ. ಈ ಬಾರಿ ಕ್ಷೇತ್ರಕ್ಕೆ ನಗರ ಮತ್ತು ಗ್ರಾಮೀಣ ಭಾಗಕ್ಕೆ ರಸ್ತೆ ಅಂಜನಾದ್ರಿ ಅಭಿವೃದ್ಧಿ ಪ್ರಾಥಮಿಕ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜನೆಗೆ ಬಜೆಟ್ನಲ್ಲಿ ಆಸಕ್ತಿ ತೋರಬೇಕಿದೆ
ಪುನೀತಕುಮಾರ ವಕೀಲ ಹನುಮನಹಳ್ಳಿ ನಿವಾಸಿ
ಗಂಗಾವತಿಗೆ ಮಹಿಳಾ ಕೇಂದ್ರಿತ ಯೋಜನೆಗಳು ಬರಬೇಕು. ಮಹಿಳಾ ಸ್ವ ಉದ್ಯೋಗಗಳಿಗೆ ಸರ್ಕಾರ ನೆರವಿನ ಹಸ್ತ ನೀಡಬೇಕು. ಇದರಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ.
ಕವಿತಾ ಮೆಟ್ರಿ ಉಪನ್ಯಾಸಕಿ ವಿದ್ಯಾನಿಕೇತನ ಪದವಿ ಕಾಲೇಜು ಗಂಗಾವತಿ
ಗಂಗಾವತಿ ಅಭಿವೃದ್ಧಿಯ ಭಾಗವಾಗಿ ಅಂಜನಾದ್ರಿ ಹಿರೇಬೆಣಕಲ್ ನಗರದ ರಸ್ತೆ ಮಾರುಕಟ್ಟೆ ಸುಸಜ್ಜಿತ ಮೈದಾನ ಸೇರಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸರ್ಕಾರ ಸೂಕ್ತ ಅನುದಾನ ನೀಡಿದರೆ. ಗಂಗಾವತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ
ಜಿ. ಜನಾರ್ದನ ರೆಡ್ಡಿ ಶಾಸಕ ಗಂಗಾವತಿ
ಗಂಗಾವತಿ ಅಭಿವೃದ್ಧಿಗೆ ಪ್ರವಾಸೋದ್ಯಮದ ಬೆಳವಣಿಗೆ ಮುಖ್ಯಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ವಸತಿ ಶಾಲೆಗಳ ಸಂಖ್ಯೆ ಹೆಚ್ಚಳದ ಜೊತೆಗೆ ಜಾನಪದ ಲೋಕ ಸ್ಥಾಪನೆಯಾಗಬೇಕು. ವಿಶ್ವಮಟ್ಟದಲ್ಲಿ ಗಂಗಾವತಿ ಗುರುತಿಸುವ ಯೋಜನೆಗಳು ನೀಡಬೇಕು