ಉತ್ತರಪ್ರದೇಶ ಪ್ರವಾಸಿ ಪ್ರಾರ್ಥ ರಾಮಜೀ ತಿವಾರಿ ಠಾಣೆಗೆ ಫಿರ್ಯಾಧಿ ನೀಡಿ, ಉತ್ತರಪ್ರದೇಶದಿಂದ 5 ಬಸ್ಸುಗಳಲ್ಲಿ ಕರ್ನಾಟಕಕ್ಕೆ ತೀರ್ಥ ಪ್ರವಾಸ ಬಂದು, ಮಂಗಳವಾರ ಅಂಜನಾದ್ರಿ ಆಂಜನೇಯನ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ತೆರಳಲು ಆನೆಗೊಂದಿ ಮಾರ್ಗವಾಗಿ ಬರುವಾಗ ಬಸವನ ದುರ್ಗಾ ಗ್ರಾಮದಲ್ಲಿ ಬಸ್ಸಿಗೆ ಕೇಬಲ್ ಬಡಿದು ತುಂಡಾಗಿದೆ. ಈ ವೇಳೆ ಸ್ಥಳೀಯರು ಕಬ್ಬಿಣದ ರಾಡಿನಿಂದ ಬಸ್ಸಿಗೆ ಹೊಡೆದು, ಹಣಕ್ಕೆ ಬೇಡಿಕೆಯಿಟ್ಟು, ಪ್ರವಾಸಿಗರ ವಿರುದ್ದ ಹಲ್ಲೆ ನಡೆಸಿದ್ದಾರೆ ಎಂದು ರಾಮಜೀ ತಿವಾರಿ ಸ್ಥಳೀಯ ನಾಗರಾಜ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗರಾಜನನ್ನು ಬಂಧಿಸಿದ್ದಾರೆ.