ಕೊಪ್ಪಳ: ಸಿನಿಮಾ ನಿರ್ದೇಶಕ ಮಧುಸೂಧನ ಹವಾಲ್ದಾರ್ ಅವರ ನೂತನ ಚಿತ್ರ ಶಿವಶರಣ ಮೋಳಿಗೆ ಮಾರಯ್ಯ ಚಿತ್ರೀಕರಣಕ್ಕೆ ಮಠದ ಆವರಣದಲ್ಲಿ ಬಸವ ಜಯಂತಿ ದಿನವಾದ ಶುಕ್ರವಾರ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ಮೋಳಿಗೆ ಮಾರಯ್ಯ ಸಿನಿಮಾವನ್ನು ಕೊಪ್ಪಳ, ಹೊಸಪೇಟೆ, ಆನೆಗೊಂದಿ ಹಾಗೂ ಗಂಗಾವತಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಗಂಗಾವತಿಯ ವಿಷ್ಣುತೀರ್ಥ ಜೋಶಿ ಸೇರಿದಂತೆ ಅನೇಕ ಸ್ಥಳೀಯ ಕಲಾವಿದರು ಸಿನಿಮಾನದಲ್ಲಿ ಅಭಿನಯಿಸಲಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಿದ ಬಳಿಕ ಸ್ವಾಮೀಜಿ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಸಿನಿಮಾದ ಮೊದಲ ದೃಶ್ಯ ಮಠದ ಆವರಣದಲ್ಲಿಯೇ ಚಿತ್ರೀಕರಿಸಲಾಯಿತು.