ದೇವರ ದಯೆಯಿಂದ ಕೊರೊನಾ ಸೋಂಕು ಯಾರಿಗೂ ತಗಲದೇ ನಿರ್ಮೂಲನೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಮೂರ್ತಿಗೆ ಅರ್ಚಕರಾದ ರಾಘವೇಂದ್ರಚಾರ ಹಾಗೂ ಮಾಧರ ಜೋಶಿ ವಿಶೇಷ ಪೂಜೆ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಸಲಿಂಗಪ್ಪ ಭಾಸ್ಕರ, ರಮೇಶ ಬೇಲೇರಿ, ರೇಣುಕಪ್ಪ ಕಮ್ಮಾರ, ವಾರ್ಡಿನ ಮುಖಂಡರಾದ ಮಲ್ಲಪ್ಪ ಸೂರಕೊಡ, ಚಂದ್ರು ಮರದಡ್ಡಿ, ಕಲ್ಲಪ್ಪ ಕರಮುಡಿ, ವಿರೇಶ ಬಳಿಗಾರ, ಶಿವರಾಜ ಕುಂಬಾರ ಹಾಗೂ ಸುದೀಪ ಇದ್ದರು.