<p><strong>ಭಟ್ಟರನರಸಾಪುರ </strong>(ಗಂಗಾವತಿ): ತಾಲ್ಲೂಕಿನ ಭಟ್ಟರ ನರಸಾಪುರ ಗ್ರಾಮದಲ್ಲಿ ಸರಿಯಾದ ಮೂಲಸೌಕರ್ಯಗಳ ಸೌಲಭ್ಯವಿಲ್ಲದೆ ಜನರು ನಿತ್ಯ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಈ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದ್ದು, ಈವರೆಗೆ ಇಲ್ಲಿ ಶುದ್ದ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಿಸಿರಸ್ತೆ, ಗ್ರಾಮದ ಸ್ವಚ್ಚತೆ, ರುದ್ರಭೂಮಿ ವ್ಯವಸ್ಥೆ ಕಲ್ಪಿಸಿಲ್ಲ. ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಕಾಣುತ್ತವೆ.</p>.<p>ಇಲ್ಲಿ ಚರಂಡಿಗಳು ನಿರ್ಮಾಣವಾಗದ ಕಾರಣ, ರಸ್ತೆಯಲ್ಲೇ ಕಸ, ಕಡ್ಡಿ, ಪ್ಯಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿ ತುಳುಕುವ ಜೊತೆಗೆ ಮನೆಗಳಲ್ಲಿನ ತ್ಯಾಜ್ಯ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.</p>.<p>ಇಷ್ಟೇಲ್ಲ ಸಮಸ್ಯೆಗಳು ಕಣ್ಣಿಗೆ ಕಂಡರೂ ಗ್ರಾ.ಪಂ ಪಿಡಿಒ ಮತ್ತು ಗ್ರಾಮದ ಸದಸ್ಯ ಕಾಣದಂತೆ ಜಾಣ ಕುರಡು ತೋರುತ್ತಿದ್ದಾರೆ. ಗ್ರಾ.ಪಂನಿಂದ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕಾಮಗಾರಿಗಳನ್ನು ಹಾಕಿಕೊಂಡು ಕೆಲಸ ಮಾಡಬಹುದಿತ್ತು. ಆದರೆ ಈವರೆಗೆ ಯಾವ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥ ಶೇಖಪ್ಪ ಹೇಳುತ್ತಾರೆ</p>.<p><span class="bold"><strong>ಕುಡಿಯಲು ನೀರಿಲ್ಲ:</strong></span> ಗ್ರಾಮದಲ್ಲಿನ ಜನರು ಕುಡಿಯಲು ಶುದ್ಧ ನೀರಿಲ್ಲದೆ, ಭತ್ತದ ಜಮೀನುಗಳಿಂದ ಹರಿದು ಬರುವ ಕಾಲುವೇ ನೀರು ಕುಡಿಯಬೇಕಾಗಿದೆ. ಇದರಿಂದ ಇಲ್ಲನ ಜನರಿಗೆ ಜ್ವರ, ಕೈ, ಕಾಲು ನೋವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿ ನೆಪಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಒಂದಿದ್ದು, ದುರಸ್ತಿ ಕಾದು 2 ವರ್ಷಗಳಾಗಿವೆ.</p>.<p>ಗ್ರಾಮವೆಲ್ಲ ಸುತ್ತಿದರೆ ಒಂದೇ ಚರಂಡಿ ಕಾಣುತ್ತದೆ. ಚರಂಡಿ ಇದ್ದರೂ, ನೀರು ಸರಾಗವಾಗಿ ಹರಿಯುವುದಿಲ್ಲ. ಇರುವ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವು ನಡೆಯುತ್ತಿಲ್ಲ. ಚರಂಡಿ ಇಲ್ಲದೆ ರಸ್ತೆ ಮಧ್ಯೆದಲ್ಲೆ ಚರಂಡಿ ಸೃಷ್ಟಿಯಾಗಿ ಕೊಳಚೆ ನೀರು ನಿಂತು ಗ್ರಾಮ ಗಬ್ಬು ನಾರುತ್ತಿದೆ.</p>.<p><span class="bold"><strong>ರಸ್ತೆ ಇಲ್ಲ:</strong></span> ಗ್ರಾಮದ ವಿವಿಧ ಓಣಿಗಳಿಗೆ ಇನ್ನೂ ರಸ್ತೆ ಭಾಗ್ಯ ಬಂದಿಲ್ಲ. ಜನರು ಕಲ್ಲು ಮಣ್ಣು ರಸ್ತೆಯಲ್ಲೇ ಸಂಚರಿಸಬೇಕು. ಮಳೆಗಾಲದಲ್ಲಿ ಈ ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿ, ಮಳೆ ನೀರು ಮನೆಗಳಿಗೆ ನುಗ್ಗುತ್ತವೆ. ಈ ಕುರಿತು ಪಿಡಿಒ ತಿಳಿಸಿದರೆ ತಾತ್ಕಾಲಿಕವಾಗಿ ಮೊರಮ್ ಹಾಕಿಸಿ ಕೈಬಿಡುತ್ತಾರೆ ಎಂದು ಗ್ರಾಮದ ನಿವಾಸಿ ಮಹೇಶ ನಾಯಕ ಹೇಳುತ್ತಾರೆ.</p>.<p>ಗ್ರಾಮದ ಮುಖ್ಯ ರಸ್ತೆ ಬಹಿರ್ದೆಸೆಯ ಜಾಗವಾಗಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ, ವೈಯಕ್ತಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇದ್ದು, ಜನ ಬಯಲನ್ನೇ ಅವಲಂಬಿಸಿದ್ದಾರೆ. ಇದರಿಂದ ಶಾಲಾ ಮಕ್ಕಳ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶಾಲೆ ಮುಂಭಾಗ ಕೊಳಚೆ ನೀರು ಹರಿಯುತ್ತವೆ. ಅದರ ಪಕ್ಕ ಮಹಿಳೆಯರು ಬಟ್ಟೆ ತೊಳೆದು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ ಎಸೆದು ಹೊಲಸು ಮಾಡಲಾಗುತ್ತಿದೆ.</p>.<p>*</p>.<p>ನರೇಗಾ ಯೋಜನೆಯಡಿ ಕಡಿಮೆ ಪ್ರಮಾಣದ ಚರಂಡಿ, ಸಿಸಿ ರಸ್ತೆಗಳ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಶಾಲೆಯ ಸಮೀಪ ಮಹಿಳೆಯರು ಬಟ್ಟೆ ತೊಳೆಯುವ ನೀರಿನ ಟ್ಯಾಂಕನ್ನು ಶೀಘ್ರವೇ ಸ್ಥಳಾಂತರಿಸಲಾಗುತ್ತದೆ.</p>.<p><span class="bold"><strong>ಕೃಷ್ಣ, ಪಿಡಿಒ, ಕೆಸರಹಟ್ಟಿ</strong></span></p>.<p>ಭಟ್ಟರನರಸಾಪುರ ಗ್ರಾಮಕ್ಕೆ ಈವರೆಗೆ ರಸ್ತೆ, ಚರಂಡಿ, ರುದ್ರಭೂಮಿ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಕ್ಷೇತ್ರದ ಶಾಸಕರು ಮತ ಕೇಳಲು ಗ್ರಾಮಕ್ಕೆ ಬರುತ್ತಾರೆ. ಅಭಿವೃದ್ಧಿ ಮಾಡಲು ಬರಲ್ಲ.</p>.<p><span class="bold"><strong>ದೇವರಾಜ, ಗ್ರಾಮದ ನಿವಾಸಿ ಭಟ್ಟರನರಸಾಪುರ</strong></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಟರನರಸಾಪುರ </strong>(ಗಂಗಾವತಿ): ತಾಲ್ಲೂಕಿನ ಭಟ್ಟರ ನರಸಾಪುರ ಗ್ರಾಮದಲ್ಲಿ ಸರಿಯಾದ ಮೂಲಸೌಕರ್ಯಗಳ ಸೌಲಭ್ಯವಿಲ್ಲದೆ ಜನರು ನಿತ್ಯ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಈ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದ್ದು, ಈವರೆಗೆ ಇಲ್ಲಿ ಶುದ್ದ ಕುಡಿಯುವ ನೀರು, ಚರಂಡಿ, ಶೌಚಾಲಯ, ಸಿಸಿರಸ್ತೆ, ಗ್ರಾಮದ ಸ್ವಚ್ಚತೆ, ರುದ್ರಭೂಮಿ ವ್ಯವಸ್ಥೆ ಕಲ್ಪಿಸಿಲ್ಲ. ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಕಾಣುತ್ತವೆ.</p>.<p>ಇಲ್ಲಿ ಚರಂಡಿಗಳು ನಿರ್ಮಾಣವಾಗದ ಕಾರಣ, ರಸ್ತೆಯಲ್ಲೇ ಕಸ, ಕಡ್ಡಿ, ಪ್ಯಾಸ್ಟಿಕ್ ಮತ್ತಿತರ ತ್ಯಾಜ್ಯ ತುಂಬಿ ತುಳುಕುವ ಜೊತೆಗೆ ಮನೆಗಳಲ್ಲಿನ ತ್ಯಾಜ್ಯ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ.</p>.<p>ಇಷ್ಟೇಲ್ಲ ಸಮಸ್ಯೆಗಳು ಕಣ್ಣಿಗೆ ಕಂಡರೂ ಗ್ರಾ.ಪಂ ಪಿಡಿಒ ಮತ್ತು ಗ್ರಾಮದ ಸದಸ್ಯ ಕಾಣದಂತೆ ಜಾಣ ಕುರಡು ತೋರುತ್ತಿದ್ದಾರೆ. ಗ್ರಾ.ಪಂನಿಂದ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕಾಮಗಾರಿಗಳನ್ನು ಹಾಕಿಕೊಂಡು ಕೆಲಸ ಮಾಡಬಹುದಿತ್ತು. ಆದರೆ ಈವರೆಗೆ ಯಾವ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥ ಶೇಖಪ್ಪ ಹೇಳುತ್ತಾರೆ</p>.<p><span class="bold"><strong>ಕುಡಿಯಲು ನೀರಿಲ್ಲ:</strong></span> ಗ್ರಾಮದಲ್ಲಿನ ಜನರು ಕುಡಿಯಲು ಶುದ್ಧ ನೀರಿಲ್ಲದೆ, ಭತ್ತದ ಜಮೀನುಗಳಿಂದ ಹರಿದು ಬರುವ ಕಾಲುವೇ ನೀರು ಕುಡಿಯಬೇಕಾಗಿದೆ. ಇದರಿಂದ ಇಲ್ಲನ ಜನರಿಗೆ ಜ್ವರ, ಕೈ, ಕಾಲು ನೋವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿ ನೆಪಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಒಂದಿದ್ದು, ದುರಸ್ತಿ ಕಾದು 2 ವರ್ಷಗಳಾಗಿವೆ.</p>.<p>ಗ್ರಾಮವೆಲ್ಲ ಸುತ್ತಿದರೆ ಒಂದೇ ಚರಂಡಿ ಕಾಣುತ್ತದೆ. ಚರಂಡಿ ಇದ್ದರೂ, ನೀರು ಸರಾಗವಾಗಿ ಹರಿಯುವುದಿಲ್ಲ. ಇರುವ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವು ನಡೆಯುತ್ತಿಲ್ಲ. ಚರಂಡಿ ಇಲ್ಲದೆ ರಸ್ತೆ ಮಧ್ಯೆದಲ್ಲೆ ಚರಂಡಿ ಸೃಷ್ಟಿಯಾಗಿ ಕೊಳಚೆ ನೀರು ನಿಂತು ಗ್ರಾಮ ಗಬ್ಬು ನಾರುತ್ತಿದೆ.</p>.<p><span class="bold"><strong>ರಸ್ತೆ ಇಲ್ಲ:</strong></span> ಗ್ರಾಮದ ವಿವಿಧ ಓಣಿಗಳಿಗೆ ಇನ್ನೂ ರಸ್ತೆ ಭಾಗ್ಯ ಬಂದಿಲ್ಲ. ಜನರು ಕಲ್ಲು ಮಣ್ಣು ರಸ್ತೆಯಲ್ಲೇ ಸಂಚರಿಸಬೇಕು. ಮಳೆಗಾಲದಲ್ಲಿ ಈ ಗ್ರಾಮದ ರಸ್ತೆಗಳು ಕೆಸರು ಗದ್ದೆಯಂತಾಗಿ, ಮಳೆ ನೀರು ಮನೆಗಳಿಗೆ ನುಗ್ಗುತ್ತವೆ. ಈ ಕುರಿತು ಪಿಡಿಒ ತಿಳಿಸಿದರೆ ತಾತ್ಕಾಲಿಕವಾಗಿ ಮೊರಮ್ ಹಾಕಿಸಿ ಕೈಬಿಡುತ್ತಾರೆ ಎಂದು ಗ್ರಾಮದ ನಿವಾಸಿ ಮಹೇಶ ನಾಯಕ ಹೇಳುತ್ತಾರೆ.</p>.<p>ಗ್ರಾಮದ ಮುಖ್ಯ ರಸ್ತೆ ಬಹಿರ್ದೆಸೆಯ ಜಾಗವಾಗಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ, ವೈಯಕ್ತಿಕ ಶೌಚಾಲಯಗಳ ಸಂಖ್ಯೆ ಕಡಿಮೆ ಇದ್ದು, ಜನ ಬಯಲನ್ನೇ ಅವಲಂಬಿಸಿದ್ದಾರೆ. ಇದರಿಂದ ಶಾಲಾ ಮಕ್ಕಳ, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಶಾಲೆ ಮುಂಭಾಗ ಕೊಳಚೆ ನೀರು ಹರಿಯುತ್ತವೆ. ಅದರ ಪಕ್ಕ ಮಹಿಳೆಯರು ಬಟ್ಟೆ ತೊಳೆದು, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ ಎಸೆದು ಹೊಲಸು ಮಾಡಲಾಗುತ್ತಿದೆ.</p>.<p>*</p>.<p>ನರೇಗಾ ಯೋಜನೆಯಡಿ ಕಡಿಮೆ ಪ್ರಮಾಣದ ಚರಂಡಿ, ಸಿಸಿ ರಸ್ತೆಗಳ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ಶಾಲೆಯ ಸಮೀಪ ಮಹಿಳೆಯರು ಬಟ್ಟೆ ತೊಳೆಯುವ ನೀರಿನ ಟ್ಯಾಂಕನ್ನು ಶೀಘ್ರವೇ ಸ್ಥಳಾಂತರಿಸಲಾಗುತ್ತದೆ.</p>.<p><span class="bold"><strong>ಕೃಷ್ಣ, ಪಿಡಿಒ, ಕೆಸರಹಟ್ಟಿ</strong></span></p>.<p>ಭಟ್ಟರನರಸಾಪುರ ಗ್ರಾಮಕ್ಕೆ ಈವರೆಗೆ ರಸ್ತೆ, ಚರಂಡಿ, ರುದ್ರಭೂಮಿ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಕ್ಷೇತ್ರದ ಶಾಸಕರು ಮತ ಕೇಳಲು ಗ್ರಾಮಕ್ಕೆ ಬರುತ್ತಾರೆ. ಅಭಿವೃದ್ಧಿ ಮಾಡಲು ಬರಲ್ಲ.</p>.<p><span class="bold"><strong>ದೇವರಾಜ, ಗ್ರಾಮದ ನಿವಾಸಿ ಭಟ್ಟರನರಸಾಪುರ</strong></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>