ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ,ಕೊರೊನಾ ತತ್ತರದ ನಡುವೆ ಪತ್ರಕರ್ತನ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕಿದೆ.ಪತ್ರಕರ್ತನಿಗೆ ಈಗ ಜೀವದ ಹಂಗು ತೊರೆದು, ಎದೆಗಾರಿಕೆ ತೋರುವ ಸಮಯ ಬಂದಿದೆ.ಪತ್ರಿಕಾ ವ್ಯವಸ್ಥೆಯ ಬೇರಿಗೇ ಹುಳು ಬಿದ್ದಿದೆ. ಆದ್ದರಿಂದ ಸುಮ್ಮನೆ ಟೊಂಗೆಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ.ಬೇರಿಗೆ ಬಿದ್ದಿರುವ ಹುಳುಗಳನ್ನು ತೆಗೆದು ಹಾಕುವ ಮನೋಬಲ ಬೇಕಿದೆ.ಪತ್ರಕರ್ತನಾದವನ ಬರಹ ದೋಷಗಳಿಂದ ಮುಕ್ತವಾಗಿರಬೇಕು. ಆದರೆ ಬಹಳಷ್ಟು ಜನ ಕಾಗುಣಿತ ದೋಷಗಳನ್ನು ಮಾಡುವುದು ಕಂಡಿದ್ದು, ಸುಧಾರಿಸಿಕೊಳ್ಳುವ ಅಗತ್ಯ ಇದೆ.ಮೊದಲು ನಾವು ಸರಿಯಾಗೋಣ, ಆನಂತರ ಸಮಾಜವನ್ನು ಸರಿಪಡಿಸೋಣ ಎಂದು ಕರೆ ನೀಡಿದರು.