ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಬಾಗಿಲು ಕ್ರಾಸ್: ನಡುರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸವಾರರಿಗೆ ತೊಂದರೆ

Last Updated 7 ಜೂನ್ 2022, 6:29 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಕ್ರಾಸ್ ಬಳಿ ಲಾರಿಯ ಸ್ಟೇರಿಂಗ್ ನ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಈ ಲಾರಿ ಹೊಸಪೇಟೆಯಿಂದ 25 ಟನ್ ಕಬ್ಬಿಣದ ರಾಡ್ ಹೊತ್ತು ರಾಯಚೂರು ಭಾಗದತ್ತ ಹೊರಟಿತ್ತು.
ಗಂಗಾವತಿ ಸಮೀಪದ ಕಡೆಬಾಗಿಲು ಕ್ರಾಸ್ ಬಳಿ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿದೆ.

ಮಂಗಳವಾರ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರ ವಾಹನಗಳು ಹೆಚ್ಚಾಗಿದ್ದು,
ಗಂಗಾವತಿ ಮಾರ್ಗದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ಲಾರಿ ನಿಲ್ಲಿಸಿದ ಸ್ಥಳದ ಸಮೀಪವೇ ವಿದ್ಯುತ್ ಸಂಪರ್ಕದ ಕಂಬ ಇದ್ದು, ಸ್ವಲ್ಪದರಲ್ಲೆ ಅನಾಹುತ ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT