<p><strong>ಕನಕಗಿರಿ:</strong> ‘ಒತ್ತುವರಿಯಾಗಿರುವ ಪಟ್ಟಣದ ರಾಜಬೀದಿಯ ಜಾಗ ತೆರವುಗೊಳಿಸಬೇಕು, ಎಪಿಎಂಸಿಯ ಹೊರಗೋಡೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ ಪೂಜಾರ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. </p>.<p>ಈ ವೇಳೆ ಮಾತನಾಡಿದ ಹರೀಶ ಪೂಜಾರ, ‘ರಸ್ತೆ ವಿಸ್ತರಣೆ ಹಾಗೂ ಸುಂದರ ನಗರ ಮಾಡಬೇಕೆಂಬ ನೆಪದಲ್ಲಿ ಈ ಹಿಂದಿನ ಪಟ್ಟಣ ಪಂಚಾಯಿತಿ ಅಧಿಕಾರಿ ಎಪಿಎಂಸಿಗೆ ಹೊಂದಿಕೊಂಡಿದ್ದ ಹತ್ತಾರು ಗೂಡಂಗಡಿಗಳನ್ನು ತೆರವುಗೊಳಿಸಿ ಬಡ ಕುಟುಂಬಗಳನ್ನು ಬೀದಿ ಪಾಲು ಮಾಡಿದ್ದಾರೆ’ ಎಂದು ದೂರಿದರು.</p>.<p>‘ಎಪಿಎಂಸಿಗೆ ಸೇರಿದ ಹೊರಗೋಡೆಯನ್ನು ಧ್ವಂಸ ಮಾಡಿ ಪ್ರಭಾವಿ ದಲ್ಲಾಳಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಜಾಗದಲ್ಲಿ ಮತ್ತೆ ಹೊರಗೋಡೆ ನಿರ್ಮಾಣ ಮಾಡಬೇಕು.ಶ್ರೀಮಂತರ ಮಳಿಗೆಗಳನ್ನು ಮುಖ್ಯ ರಸ್ತೆಗೆ ತರುವ ಸಲುವಾಗಿ ಅಧಿಕಾರಿಗಳು ದಲ್ಲಾಳಿ ವರ್ತಕರ ಜತೆಗೆ ಶಾಮೀಲಾಗಿ ಹೊರಗೋಡೆ ಒಡೆದು ಹಾಕಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈವರೆಗೆ ಈ ಮುಖ್ಯಾಧಿಕಾರಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರಿದರು.</p>.<p>ಕಾನೂನು ಪ್ರಕಾರ ದಲ್ಲಾಳಿ ಮಳಿಗೆಗಳು ಗಂಗಾವತಿ- ಲಿಂಗಸೂರು ರಸ್ತೆಗೆ ಮುಖಮಾಡಿ ವಹಿವಾಟು ನಡೆಸುವಂತಿಲ್ಲ ಇಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಪೂಜಾರ ವಿವರಿಸಿದರು.</p><p>ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಬಡಿಗೇರ, ಪ್ರಮುಖರಾದ ಬಸವರಾಜ ಕೋರಿ ಅಂಬ್ರೇಶ ಪಟ್ಟಣಶೆಟ್ರ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ‘ಒತ್ತುವರಿಯಾಗಿರುವ ಪಟ್ಟಣದ ರಾಜಬೀದಿಯ ಜಾಗ ತೆರವುಗೊಳಿಸಬೇಕು, ಎಪಿಎಂಸಿಯ ಹೊರಗೋಡೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ ಪೂಜಾರ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. </p>.<p>ಈ ವೇಳೆ ಮಾತನಾಡಿದ ಹರೀಶ ಪೂಜಾರ, ‘ರಸ್ತೆ ವಿಸ್ತರಣೆ ಹಾಗೂ ಸುಂದರ ನಗರ ಮಾಡಬೇಕೆಂಬ ನೆಪದಲ್ಲಿ ಈ ಹಿಂದಿನ ಪಟ್ಟಣ ಪಂಚಾಯಿತಿ ಅಧಿಕಾರಿ ಎಪಿಎಂಸಿಗೆ ಹೊಂದಿಕೊಂಡಿದ್ದ ಹತ್ತಾರು ಗೂಡಂಗಡಿಗಳನ್ನು ತೆರವುಗೊಳಿಸಿ ಬಡ ಕುಟುಂಬಗಳನ್ನು ಬೀದಿ ಪಾಲು ಮಾಡಿದ್ದಾರೆ’ ಎಂದು ದೂರಿದರು.</p>.<p>‘ಎಪಿಎಂಸಿಗೆ ಸೇರಿದ ಹೊರಗೋಡೆಯನ್ನು ಧ್ವಂಸ ಮಾಡಿ ಪ್ರಭಾವಿ ದಲ್ಲಾಳಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಜಾಗದಲ್ಲಿ ಮತ್ತೆ ಹೊರಗೋಡೆ ನಿರ್ಮಾಣ ಮಾಡಬೇಕು.ಶ್ರೀಮಂತರ ಮಳಿಗೆಗಳನ್ನು ಮುಖ್ಯ ರಸ್ತೆಗೆ ತರುವ ಸಲುವಾಗಿ ಅಧಿಕಾರಿಗಳು ದಲ್ಲಾಳಿ ವರ್ತಕರ ಜತೆಗೆ ಶಾಮೀಲಾಗಿ ಹೊರಗೋಡೆ ಒಡೆದು ಹಾಕಿ ವರ್ತಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈವರೆಗೆ ಈ ಮುಖ್ಯಾಧಿಕಾರಿಯ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ದೂರಿದರು.</p>.<p>ಕಾನೂನು ಪ್ರಕಾರ ದಲ್ಲಾಳಿ ಮಳಿಗೆಗಳು ಗಂಗಾವತಿ- ಲಿಂಗಸೂರು ರಸ್ತೆಗೆ ಮುಖಮಾಡಿ ವಹಿವಾಟು ನಡೆಸುವಂತಿಲ್ಲ ಇಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದು ಪೂಜಾರ ವಿವರಿಸಿದರು.</p><p>ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಬಡಿಗೇರ, ಪ್ರಮುಖರಾದ ಬಸವರಾಜ ಕೋರಿ ಅಂಬ್ರೇಶ ಪಟ್ಟಣಶೆಟ್ರ, ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>