ಕನಕಗಿರಿಯ ಪುಷ್ಕರಣಿ ಪ್ರದೇಶದಲ್ಲಿ ತಲೆಮುಡಿ ನೀಡಿದ ಭಕ್ತರ ಕೂದಲನ್ನು ಪ್ಲಾಸ್ಟಿಕ್ನಲ್ಲಿ ತುಂಬಿಟ್ಟಿರುವುದು
ಪುಷ್ಕರಣಿ ಪ್ರದೇಶದಲ್ಲಿರುವ ದೇವಾಲಯ ಕುಸಿದು ಬಿದ್ದಿರುವುದು
ಕನಕಗಿರಿಯ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಬಿಟ್ಟು ಹೋಗಿರುವ ಹಳೆಯ ಬಟ್ಟೆ ಬರೆಗಳನ್ನು ಬೇರೆಡೆಗೆ ಸಾಗಾಣಿ ಮಾಡದಿರುವುದು

ಐತಿಹಾಸಿಕ ತಾಣದಲ್ಲಿರುವ ಸ್ಮಾರಕಗಳನ್ನು ರಕ್ಷಣೆ ಮಾಡುವಲ್ಲಿ ಪ್ರತಿಯೊಂದು ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ. ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಸಹ ಈ ಕಡೆಗೆ ಗಮನ ನೀಡಿಲ್ಲ. ಹೀಗಾಗಿ ಸ್ಮಾರಕಗಳು ಹಾಳಾಗುತ್ತಿದ್ದು ಅನೈತಿಕ ತಾಣಗಳಾಗಿ ಪರಿವರ್ತನೆಗೊಂಡಿವೆ
ಕನಕರೆಡ್ಡಿ ಕೆರಿ ಇತಿಹಾಸ ಪ್ರೇಮಿ
ರಾಜ್ಯ ಪುರಾತತ್ವ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಕನಕಗಿರಿ ಸ್ಮಾರಕ ಸಂರಕ್ಷಣ ಯೋಜನೆ ರೂಪಿಸಿ ಪುನರುಜ್ಜೀವನಗೊಳಿಸಬೇಕಾದದ್ದು ಅತ್ಯಂತ ಅಗತ್ಯದ ಕಾರ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಕ್ರಿಯಾಶೀಲವಾಗಲಿ. ಇಲ್ಲದಿದ್ದರೆ ಇನ್ನೂ ಕೆಲವೇ ದಿನಗಳಲ್ಲಿ ಕಣ್ಣಿದ್ದವರು ನೋಡಬೇಕಾದ ಕನಕಗಿರಿ ಎಂಬ ನಾಣ್ನುಡಿ ಅರ್ಥ ಕಳೆದು ಕೊಳ್ಳುತ್ತದೆ
ಶರಣಬಸಪ್ಪ ಕೋಲ್ಕಾರ ಇತಿಹಾಸ ಸಂಶೋಧಕ
ದೇಗುಲಗಳು ಶಿಲಾಶಾಸನ ಬಾವಿ ಪುಷ್ಕರಣಿ ಇತರೆ ಸ್ಮಾರಕಗಳು ರಾಷ್ಟ್ರಿಯ ಸಂಪತ್ತು ಆಗಿವೆ. ಇಂಥ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯರು ಮುಂದಾಗಬೇಕು
ಅಮರೇಶ ಪಟ್ಟಣಶೆಟ್ರ ಸ್ಥಳೀಯ ಮುಖಂಡ