ಈಗಾಗಲೇ ಈ ಬಳಗದ ಸದಸ್ಯರು ಒಂದು ತಿಂಗಳಿನಿಂದ ಬೆಟ್ಟದ ವಿವಿಧ ಭಾಗಗಳಲ್ಲಿ ಈ ಕಾರ್ಯ ನಡೆಸಿದ್ದಾರೆ. ವಿವಿಧ ಭಾಗಗಳಲ್ಲಿನ ಗಿಡಗಳಲ್ಲಿ ನೇತುಹಾಕಿರುವ ಮಡಿಕೆ, ತತ್ರಾಣಿ, ಪ್ಲಾಸ್ಟಿಕ್ ವಸ್ತುಗಳು ಪಕ್ಷಿಗಳಿಗೆ ನೀರುಣಿಸುತ್ತಿವೆ. ನಮ್ಮ ಬಳಗ ಸೇರಿಕೊಂಡು ಪಕ್ಷಿಗಳಿಗೆ ನೀರುಣಿಸುವ ಕಾರ್ಯದ ಮೂಲಕ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದು ಸಂತಸವಾಗಿದೆ ಎಂದು ರಾಘವೇಂದ್ರ ಹೇಳಿದರು. ಬಸವರಾಜ ಸಜ್ಜನ್, ವಿಶ್ವನಾಥ ಇಳಗೇರ, ಸಾಗರ ಕಾಟ್ವಾ, ಪ್ರೀತಮ್ ಬಸ್ವಾ, ಹುಸೇನ ಅಮಿನಗಡ, ಬಸವರಾಜ ಹೂಗಾರ, ವಿಶಾಲ ಇದ್ದರು.