ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬೈಗುಳಗಳ ಬಗ್ಗೆ ಪ್ರಧಾನಿ ಅವರಿಗೆ ಚಿಂತೆ ಇದೆಯೇ ಹೊರತು ಉದ್ಯೋಗ, ಸೌಲಭ್ಯ, ಅಭಿವೃದ್ಧಿ ಕಲ್ಪಿಸಿ ಜನರ ಬದುಕು ಹಸನುಗೊಳಿಸುವ ಉದ್ದೇಶವಿಲ್ಲ. ಬಿಜೆಪಿ ಧರ್ಮ ಹಾಗೂ ಭಾವನಾತ್ಮಕ ವಿಷಯಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ’ ಎಂದರು.