<figcaption>""</figcaption>.<figcaption>""</figcaption>.<p><strong>ಕೊಪ್ಪಳ: </strong>ಸಮೀಪದ ಭಾಗ್ಯನಗರ ಪಟ್ಟಣದ ಉದ್ಯಮಿಯೊಬ್ಬರು ಗೃಹ ಪ್ರವೇಶಕ್ಕೆ ಪತ್ನಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.</p>.<p>ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆ.ವಿ.ಎನ್. ಮಾಧವಿ ಅವರು ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸವಿನೆನಪಿಗಾಗಿ ಪತಿ ಶ್ರೀನಿವಾಸ ಗುಪ್ತಾ ಪುತ್ಥಳಿ ನಿರ್ಮಿಸಿದ್ದಾರೆ.</p>.<p>ಭಾಗ್ಯನಗರದ ರೈಲ್ವೆ ನಿಲ್ಧಾಣ ಬಳಿಯ ಗುಪ್ತಾ ಅಪಾರ್ಟ್ಮೆಂಟ್ ಆವರಣದಲ್ಲಿ ಮನೆ ನಿರ್ಮಿಸಬೇಕು ಎಂಬುದು ಪತ್ನಿಯ ಬಯಕೆಯಾಗಿತ್ತು. ಅವರ ಆಸೆ ಪ್ರಸ್ತುತ ಪತಿ ಈಡೇರಿಸಿದ್ದು, ಆದರೆ ಅದನ್ನು ನೋಡಲು ಪತ್ನಿ ಇಲ್ಲದಿದರುವುದರಿಂದ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ಅವರ ನೆನಪನ್ನು ಜೀವಂತವಾಗಿದ್ದಾರೆ.</p>.<p>ಬೆಂಗಳೂರು ಗೊಂಬೆ ಮನೆಯಲ್ಲಿ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಪ್ರತಿಮೆ ತಯಾರಿಸಲಾಗಿದೆ. ಸುಮಾರು 15 ರಿಂದ 20 ಕೆಜಿ ತೂಕ ಹೊಂದಿರುವ ಈ ಪ್ರತಿಮೆಯನ್ನು ಒಂದು ವರ್ಷದ ಅವಧಿಯಲ್ಲಿ ₹ 10 ಲಕ್ಷ ವೆಚ್ಚದೊಂದಿಗೆ ಶಿಲ್ಪಿ ಶ್ರೀಧರಮೂರ್ತಿ ತಯಾರಿಸಿದ್ದಾರೆ.</p>.<p>ಪ್ರತಿಮೆ ನಿರ್ಮಿಸಿರುವುದು ಮಕ್ಕಳಿಗೂ ಸಂತಸ ತಂದಿದೆ. ಅಲ್ಲದೇ ಪ್ರತಿಮೆಯನ್ನು ಕಂಡ ತಕ್ಷಣ ಆತ್ಮತೃಪ್ತಿ ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸ ಗುಪ್ತಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<p><strong>ಕೊಪ್ಪಳ: </strong>ಸಮೀಪದ ಭಾಗ್ಯನಗರ ಪಟ್ಟಣದ ಉದ್ಯಮಿಯೊಬ್ಬರು ಗೃಹ ಪ್ರವೇಶಕ್ಕೆ ಪತ್ನಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.</p>.<p>ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆ.ವಿ.ಎನ್. ಮಾಧವಿ ಅವರು ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸವಿನೆನಪಿಗಾಗಿ ಪತಿ ಶ್ರೀನಿವಾಸ ಗುಪ್ತಾ ಪುತ್ಥಳಿ ನಿರ್ಮಿಸಿದ್ದಾರೆ.</p>.<p>ಭಾಗ್ಯನಗರದ ರೈಲ್ವೆ ನಿಲ್ಧಾಣ ಬಳಿಯ ಗುಪ್ತಾ ಅಪಾರ್ಟ್ಮೆಂಟ್ ಆವರಣದಲ್ಲಿ ಮನೆ ನಿರ್ಮಿಸಬೇಕು ಎಂಬುದು ಪತ್ನಿಯ ಬಯಕೆಯಾಗಿತ್ತು. ಅವರ ಆಸೆ ಪ್ರಸ್ತುತ ಪತಿ ಈಡೇರಿಸಿದ್ದು, ಆದರೆ ಅದನ್ನು ನೋಡಲು ಪತ್ನಿ ಇಲ್ಲದಿದರುವುದರಿಂದ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ಅವರ ನೆನಪನ್ನು ಜೀವಂತವಾಗಿದ್ದಾರೆ.</p>.<p>ಬೆಂಗಳೂರು ಗೊಂಬೆ ಮನೆಯಲ್ಲಿ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಪ್ರತಿಮೆ ತಯಾರಿಸಲಾಗಿದೆ. ಸುಮಾರು 15 ರಿಂದ 20 ಕೆಜಿ ತೂಕ ಹೊಂದಿರುವ ಈ ಪ್ರತಿಮೆಯನ್ನು ಒಂದು ವರ್ಷದ ಅವಧಿಯಲ್ಲಿ ₹ 10 ಲಕ್ಷ ವೆಚ್ಚದೊಂದಿಗೆ ಶಿಲ್ಪಿ ಶ್ರೀಧರಮೂರ್ತಿ ತಯಾರಿಸಿದ್ದಾರೆ.</p>.<p>ಪ್ರತಿಮೆ ನಿರ್ಮಿಸಿರುವುದು ಮಕ್ಕಳಿಗೂ ಸಂತಸ ತಂದಿದೆ. ಅಲ್ಲದೇ ಪ್ರತಿಮೆಯನ್ನು ಕಂಡ ತಕ್ಷಣ ಆತ್ಮತೃಪ್ತಿ ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸ ಗುಪ್ತಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>