ಜೆಜೆಎಂ ಕಾಮಗಾರಿ ಇನ್ನೂ ಅಪೂರ್ಣ ಸಮಸ್ಯೆಗೆ ಸ್ಪಂದಿಸದ ಗ್ರಾ.ಪಂ ಸದಸ್ಯರು ಕೊಳವೆಗಳ ದುರಸ್ತಿ ನೆಪದಲ್ಲಿ ಹಣ ಪೋಲು
‘ಸಮಸ್ಯೆ ಗಮನಕ್ಕೆ ಬಂದಿಲ್ಲ’
ಜೆಜೆಎಂ ಕೆಲಸ ಅಪೂರ್ಣಗೊಂಡಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಮುದೇನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಸ್ತಗೀರಸಾಬ್ ಬಡಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಾದಾಪುರದಲ್ಲಿ ನೀರುಗಂಟಿ ಇಲ್ಲದ ಕಾರಣ ಮುದೇನೂರಿನಿಂದ ನಿವೃತ್ತ ನೀರುಗಂಟಿಯನ್ನು ಕಳಿಸಿ ಕೆಲಸ ಮಾಡಿಸುತ್ತಿದ್ದೇವೆ. ಆದರೆ ಅಶುದ್ಧ ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದ’ ಎಂದು ತಿಳಿಸಿದರು.