ಕೆಲ ಭಕ್ತರು ಬಯಲು ಜಾಗದಲ್ಲಿ, ದೂರದ ಹೊಲದಲ್ಲಿ ಟೆಂಟ್ ಹಾಕಿ ಕುರಿ, ಕೋಳಿ ಬಲಿ ನೀಡಿದರೆ, ಇನ್ನು ಕೆಲವರು ತುಂಗಭದ್ರಾ ನದಿ ಮಧ್ಯದಲ್ಲಿ ಸ್ನಾನಕ್ಕೆ ಬಂದ ಭಕ್ತರ ಸಮ್ಮುಖದಲ್ಲಿ ಕುರಿ ಕಡಿದು ರಕ್ತ ಹರಿಸಿದರು. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರೂ ಕೇಳಲಿಲ್ಲ. ನಿಷೇಧವಿದ್ದರೂ ಪ್ರಾಣಿಬಲಿ ಬಿಡಲಿಲ್ಲ.