<p><strong>ಕನಕಗಿರಿ</strong>: ಟೊಮೆಟೊ ದರ ಕುಸಿತ ಕಂಡ ಹಿನ್ನೆಲೆ ರೈತರು ರಸ್ತೆಯಲ್ಲಿಯೇ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಬಾಕ್ಸ್ಗಳನ್ನು ಮನೆಗೆ ತೆಗೆದುಕೊಂಡು ಹೋದರು.</p>.<p>ಅನೇಕ ರೈತರು ತಮ್ಮ ಪರಿಚಯಸ್ಥ ಜನರನ್ನು ಕೂಗಿ ಉಚಿತವಾಗಿ ಟೊಮೆಟೊ ಹಂಚಿದರು. ಉತ್ತಮ ದರ ಸಿಗದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ರೈತರು ಸಪ್ಪೆಮುಖ ಹಾಕಿಕೊಂಡು ಮನೆ ಕಡೆಗೆ ಹೆಜ್ಜೆ ಹಾಕಿದರು.</p>.<p>ಕಳೆದ ಮೂರು ತಿಂಗಳ ಹಿಂದೆ ಒಂದು ಬಾಕ್ಸ್ ಟೊಮೆಟೊ ₹500 ರಿಂದ ₹600ಕ್ಕೆ ಮಾರಾಟವಾಗಿತ್ತು. ಒಂದು ತಿಂಗಳ ಹಿಂದೆ ಬಾಕ್ಸ್ಗೆ ₹150 ರಿಂದ ₹250ಕ್ಕೆ ಮಾರಾಟವಾಗಿತ್ತು. ಶುಕ್ರವಾರ ಎಪಿಎಂಸಿಯಲ್ಲಿ ₹30 ರಿಂದ ₹50ಕ್ಕೆ ಮಾರಾಟವಾದರೂ ಖರೀದಿಸುವವರು ಇರಲಿಲ್ಲ ಎನ್ನುತ್ತಾರೆ ರೈತರು.</p>.<p>ಈ ಭಾಗದಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಬಹುತೇಕ ರೈತರು ಟೊಮೆಟೊ ಬೆಳೆದಿರುವುದು ದರ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆಯ ದಲ್ಲಾಳಿ ವರ್ತಕ ನಾಗೇಂದ್ರ ನಾಯಕ ತಿಳಿಸಿದರು.</p>.<p>ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆಗೆ ಬೆಲೆ ಸಿಗುತ್ತಿಲ್ಲ, ಕೂಲಿಕಾರರಿಗೆ ಕೂಲಿ ಹಣ ನೀಡುವಷ್ಟು ದರ ಸಿಕ್ಕಿಲ್ಲ, ರೈತನ ಪರಿಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ ಎಂದು ಬೈಲಕ್ಕುಂಪುರ, ಕನಕಗಿರಿ, ಸೋಮಸಾಗರ ರೈತರು ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ಟೊಮೆಟೊ ದರ ಕುಸಿತ ಕಂಡ ಹಿನ್ನೆಲೆ ರೈತರು ರಸ್ತೆಯಲ್ಲಿಯೇ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ, ಖಾಲಿ ಬಾಕ್ಸ್ಗಳನ್ನು ಮನೆಗೆ ತೆಗೆದುಕೊಂಡು ಹೋದರು.</p>.<p>ಅನೇಕ ರೈತರು ತಮ್ಮ ಪರಿಚಯಸ್ಥ ಜನರನ್ನು ಕೂಗಿ ಉಚಿತವಾಗಿ ಟೊಮೆಟೊ ಹಂಚಿದರು. ಉತ್ತಮ ದರ ಸಿಗದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ರೈತರು ಸಪ್ಪೆಮುಖ ಹಾಕಿಕೊಂಡು ಮನೆ ಕಡೆಗೆ ಹೆಜ್ಜೆ ಹಾಕಿದರು.</p>.<p>ಕಳೆದ ಮೂರು ತಿಂಗಳ ಹಿಂದೆ ಒಂದು ಬಾಕ್ಸ್ ಟೊಮೆಟೊ ₹500 ರಿಂದ ₹600ಕ್ಕೆ ಮಾರಾಟವಾಗಿತ್ತು. ಒಂದು ತಿಂಗಳ ಹಿಂದೆ ಬಾಕ್ಸ್ಗೆ ₹150 ರಿಂದ ₹250ಕ್ಕೆ ಮಾರಾಟವಾಗಿತ್ತು. ಶುಕ್ರವಾರ ಎಪಿಎಂಸಿಯಲ್ಲಿ ₹30 ರಿಂದ ₹50ಕ್ಕೆ ಮಾರಾಟವಾದರೂ ಖರೀದಿಸುವವರು ಇರಲಿಲ್ಲ ಎನ್ನುತ್ತಾರೆ ರೈತರು.</p>.<p>ಈ ಭಾಗದಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಬಹುತೇಕ ರೈತರು ಟೊಮೆಟೊ ಬೆಳೆದಿರುವುದು ದರ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆಯ ದಲ್ಲಾಳಿ ವರ್ತಕ ನಾಗೇಂದ್ರ ನಾಯಕ ತಿಳಿಸಿದರು.</p>.<p>ಕಷ್ಟಪಟ್ಟು ಬೆಳೆದ ಟೊಮೆಟೊ ಬೆಳೆಗೆ ಬೆಲೆ ಸಿಗುತ್ತಿಲ್ಲ, ಕೂಲಿಕಾರರಿಗೆ ಕೂಲಿ ಹಣ ನೀಡುವಷ್ಟು ದರ ಸಿಕ್ಕಿಲ್ಲ, ರೈತನ ಪರಿಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ ಎಂದು ಬೈಲಕ್ಕುಂಪುರ, ಕನಕಗಿರಿ, ಸೋಮಸಾಗರ ರೈತರು ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>