<p><strong>ಕೊಪ್ಪಳ</strong>: ಜಿಲ್ಲಾ ಕೇಂದ್ರದ ಸಮೀಪದಲ್ಲಿ ಅಪಾಯಕಾರಿ ಕಪ್ಪು ಕಣಗಳ ದೂಳಿನಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ನಡೆದ ಕೊಪ್ಪಳ ಬಂದ್ ವೇಳೆ ಸಾರ್ವಜನಿಕರು ಶಾಸಕ, ಸಂಸದರನ್ನು ತರಾಟೆಗೆ ತೆಗೆದುಕೊಂಡರು.</p>.<p>ಗವಿಮಠ ಬಳಿಯಿಂದ ಅಶೋಕ ವೃತ್ತದ ತನಕ ಮೆರವಣಿಗೆ ನಡೆಯಿತು. ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಜನ ಸುತ್ತುವರಿದು ವಾಗ್ದಾಳಿ ನಡೆಸಿದರು. </p>.<p>‘ಮಾಲಿನ್ಯದಿಂದ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸದನದಲ್ಲಿ ಈ ಕುರಿತು ಚಕಾರ ಎತ್ತಿಲ್ಲ’ ಎಂದು ಶಾಸಕ ಹಿಟ್ನಾಳ ಅವರೊಂದಿಗೆ ವಾಗ್ವಾದ ನಡೆಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಹೋರಾಟ ನಿರತರನ್ನು ಸಮಾಧಾನ ಪಡಿಸಿದರು.</p>.<p>ಶಾಸಕ, ಸಂಸದ, ಮಾಜಿ ಸಂಸದರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಲು ವಿರೋಧ ವ್ಯಕ್ತವಾಯಿತು.</p>.<p>‘ಜನಪ್ರತಿನಿಧಿಗಳಿಂದಲೇ ಸಮಸ್ಯೆಯಾಗಿದ್ದು, ಅವರು ಮಾತನಾಡುವುದು ಬೇಡ’ ಎಂದು ಆಕ್ರೋಶ ಹೊರಹಾಕಿದರು. ‘ಸದನದಲ್ಲಿ ಒಮ್ಮೆಯೂ ಮಾತನಾಡದ ಶಾಸಕ ಹಿಟ್ನಾಳ ಕಾರ್ಖಾನೆಗಳ ಪರವಾಗಿ ಇದ್ದಾರೆಯೇ’ ಎಂದು ಪ್ರಶ್ನಿಸಿದರು. ಕೊರಳಲ್ಲಿ ಧರಿಸಿರುವ ಹಸಿರು ಟವೆಲ್ ತೆಗೆಯುವಂತೆ ಒತ್ತಾಯಿಸಿದರು.</p>.<p>‘ಜನಪ್ರತಿನಿಧಿಗಳನ್ನು ನಾವೇ ಕರೆದಿದ್ದೇವೆ. ಅಗೌರವ ತೋರಬೇಡಿ’ ಎಂದು ಬಂದ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿರತಕ್ಷಣಾ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ಬಾಧಿತ ಗ್ರಾಮಗಳ ಜನರನ್ನು ಸಮಾಧಾನಪಡಿಸಿದರೂ ಜನರು ಸುಮ್ಮನಾಗಲಿಲ್ಲ.</p>.<p>ರಾಜ್ಯದ ವಿವಿಧ ಮಠಗಳ ಮಠಾಧೀಶರು ಹಾಗೂ ರೈತ ನಾಯಕರು ಪಾಲ್ಗೊಂಡಿದ್ದರು. ದಿನಪೂರ್ತಿ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು.</p>.<p><strong>ಶಾಸಕರು ಸಂಸದರು ಪರಿಸರ ಮಾಲಿನ್ಯದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ನಿಮಗೆ ಮತ ಹಾಕುವುದಿಲ್ಲ ಎಂದು ಜನ ಹೇಳುತ್ತಾರೆ </strong></p><p><strong>– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಜಿಲ್ಲಾ ಕೇಂದ್ರದ ಸಮೀಪದಲ್ಲಿ ಅಪಾಯಕಾರಿ ಕಪ್ಪು ಕಣಗಳ ದೂಳಿನಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ನಡೆದ ಕೊಪ್ಪಳ ಬಂದ್ ವೇಳೆ ಸಾರ್ವಜನಿಕರು ಶಾಸಕ, ಸಂಸದರನ್ನು ತರಾಟೆಗೆ ತೆಗೆದುಕೊಂಡರು.</p>.<p>ಗವಿಮಠ ಬಳಿಯಿಂದ ಅಶೋಕ ವೃತ್ತದ ತನಕ ಮೆರವಣಿಗೆ ನಡೆಯಿತು. ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಜನ ಸುತ್ತುವರಿದು ವಾಗ್ದಾಳಿ ನಡೆಸಿದರು. </p>.<p>‘ಮಾಲಿನ್ಯದಿಂದ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸದನದಲ್ಲಿ ಈ ಕುರಿತು ಚಕಾರ ಎತ್ತಿಲ್ಲ’ ಎಂದು ಶಾಸಕ ಹಿಟ್ನಾಳ ಅವರೊಂದಿಗೆ ವಾಗ್ವಾದ ನಡೆಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಹೋರಾಟ ನಿರತರನ್ನು ಸಮಾಧಾನ ಪಡಿಸಿದರು.</p>.<p>ಶಾಸಕ, ಸಂಸದ, ಮಾಜಿ ಸಂಸದರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಲು ವಿರೋಧ ವ್ಯಕ್ತವಾಯಿತು.</p>.<p>‘ಜನಪ್ರತಿನಿಧಿಗಳಿಂದಲೇ ಸಮಸ್ಯೆಯಾಗಿದ್ದು, ಅವರು ಮಾತನಾಡುವುದು ಬೇಡ’ ಎಂದು ಆಕ್ರೋಶ ಹೊರಹಾಕಿದರು. ‘ಸದನದಲ್ಲಿ ಒಮ್ಮೆಯೂ ಮಾತನಾಡದ ಶಾಸಕ ಹಿಟ್ನಾಳ ಕಾರ್ಖಾನೆಗಳ ಪರವಾಗಿ ಇದ್ದಾರೆಯೇ’ ಎಂದು ಪ್ರಶ್ನಿಸಿದರು. ಕೊರಳಲ್ಲಿ ಧರಿಸಿರುವ ಹಸಿರು ಟವೆಲ್ ತೆಗೆಯುವಂತೆ ಒತ್ತಾಯಿಸಿದರು.</p>.<p>‘ಜನಪ್ರತಿನಿಧಿಗಳನ್ನು ನಾವೇ ಕರೆದಿದ್ದೇವೆ. ಅಗೌರವ ತೋರಬೇಡಿ’ ಎಂದು ಬಂದ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿರತಕ್ಷಣಾ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ಬಾಧಿತ ಗ್ರಾಮಗಳ ಜನರನ್ನು ಸಮಾಧಾನಪಡಿಸಿದರೂ ಜನರು ಸುಮ್ಮನಾಗಲಿಲ್ಲ.</p>.<p>ರಾಜ್ಯದ ವಿವಿಧ ಮಠಗಳ ಮಠಾಧೀಶರು ಹಾಗೂ ರೈತ ನಾಯಕರು ಪಾಲ್ಗೊಂಡಿದ್ದರು. ದಿನಪೂರ್ತಿ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು.</p>.<p><strong>ಶಾಸಕರು ಸಂಸದರು ಪರಿಸರ ಮಾಲಿನ್ಯದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ನಿಮಗೆ ಮತ ಹಾಕುವುದಿಲ್ಲ ಎಂದು ಜನ ಹೇಳುತ್ತಾರೆ </strong></p><p><strong>– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>