ಈ ಕುರಿತು ಪ್ರತಿಕ್ರಿಯಿಸಿದ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಮಹಮ್ಮದ್ಫಯಾಜ್, ‘ಬುಧವಾರ ಬೆಳಿಗ್ಗೆ 10ಕ್ಕೆ ಮಂಜುನಾಥ ಕರ್ತವ್ಯದ ಮೇರೆಗೆ ಕೊಲ್ಹಾಪುರಕ್ಕೆ ಬಸ್ನಲ್ಲಿ ತೆರಳಿದ್ದು, ಮಧ್ಯಾಹ್ನ 12ಕ್ಕೆ ಮಗಳ ಸಾವಿನ ಸುದ್ದಿ ಬಂದಿದೆ. ಮಂಜುನಾಥ ಅವರ ಬಳಿ ಮೊಬೈಲ್ ಇರಲಿಲ್ಲ. ನಾವು ಪ್ರಯತ್ನಿಸಿದರೂ ಅವರು ಸಂಪರ್ಕಕಕ್ಕೆ ಸಿಗಲಿಲ್ಲ. ನಮಗೂ ಮಾನವೀಯತೆ ಇದೆ. ಸಂಪರ್ಕ ಕೊರತೆಯಿಂದ ಮಾಹಿತಿ ನೀಡಲು ಆಗಲಿಲ್ಲ’ ಎಂದರು.