<p><strong>ಕುಕನೂರು</strong>: ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್ನಿಲ್ದಾಣದ ಕ್ಯಾಂಟೀನ್ ಕಳೆದ 10 ತಿಂಗಳಿಂದ ಬಂದ್ ಆಗಿದ್ದು, ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ, ಉಪಾಹಾರ, ಊಟಕ್ಕಾಗಿ ಬಸ್ನಿಲ್ದಾಣದ ಹೊರಗಿನ ಹೋಟೆಲ್ಗಳನ್ನು ಹುಡುಕಿ ಹೋಗುವಂತಾಗಿದೆ.</p>.<p>ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಿದೆ.</p>.<p>ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ ಬಂದ್ ಆಗಲು ದುಬಾರಿ ಬಾಡಿಗೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಬಾಡಿಗೆದಾರ ಮಾಸಿಕ ₹22,369 ಬಾಡಿಗೆಯಲ್ಲಿ ಕ್ಯಾಂಟೀನ್ ನೀಡಲಾಗಿತ್ತು. ವಿದ್ಯುತ್ ಬಿಲ್ ಹಾಗೂ ಇತರ ಖರ್ಚುಗಳು ಸೇರಿ ಮಾಸಿಕ ₹30 ಸಾವಿರ ವರೆಗೆ ಖರ್ಚು ತಗಲುತ್ತಿತ್ತು. ಹಿಂದಿನ ಬಾಡಿಗೆದಾರರು ಬಾಡಿಗೆ ಕಟ್ಟಲಾಗದೆ ಬೇರೆ ಕಡೆ ಹೋಗಿದ್ದಾರೆ.</p>.<p>ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ ದುಬಾರಿ ಬಾಡಿಗೆ ಹಿನ್ನೆಲೆಯಲ್ಲಿ ಯಾರೊಬ್ಬರೂ ಟೆಂಡರ್ ಹಾಕುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಕ್ಯಾಂಟೀನ್ ಬಂದ್ ಆಗಿದ್ದರಿಂದ ಬೇರೆ ಗ್ರಾಮಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮನೆಯಿಂದ ಊಟ ಮಾಡಿಕೊಂಡು ಬರಬೇಕಿದೆ. ಇನ್ನು ಬಸ್ ನಿಲ್ದಾಣ ಸಮೀಪದಲ್ಲಿನ ಹೊಟೇಲ್ಗಳಿಗೆ ಹೋದರೆ ಬಸ್ ಕೈ ತಪ್ಪುತ್ತದೆ. ಈ ಕಾರಣಕ್ಕೆ ಪ್ರಯಾಣಿಕರು ನಿಲ್ದಾಣದಲ್ಲಿನ ಬೇಕರಿಗಳಲ್ಲಿ ತಿನಿಸುಗಳನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳು, ಕ್ಯಾಂಟೀನ್ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p>ಕುಡಿಯುವ ನೀರಿನ ಮರಿಚಿಕೆ: ನಿಲ್ದಾಣದಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ. ಎಷ್ಟೋ ಬಾರಿ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರು ಏನು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.</p>.<p>ತಾಲ್ಲೂಕಿನ ಕುಕನೂರು, ಬನ್ನಿಕೊಪ್ಪ, ಮಸಬ ಹಂಚಿನಾಳ, ಮಂಗಳೂರು ಹೀಗೆ ಪ್ರಮುಖ ಗ್ರಾಮಗಳ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ಗಳು ಬಂದಾಗಿವೆ. ಉದ್ಘಾಟನೆ ಆದಗಿನಿಂದಲೂ ಪ್ರಾರಂಭವಾಗದೇ ಇರುವುದು ದುರಂತ.</p>.<p>ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ದುಬಾರಿ ಬಾಡಿಗೆಯನ್ನು ಕಡಿತಗೊಳಿಸಿ ಕಡಿಮೆ ಬಾಡಿಗೆಯಲ್ಲಿ ಕ್ಯಾಂಟೀನ್ಗಳನ್ನು ನೀಡಿದಾಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಪ್ರಯಾಣಿಕರು.</p>.<div><blockquote>ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ಗಳ ಬಾಡಿಗೆ ದುಬಾರಿಯಾಗಿದೆ ಎಂದು ಬಾಡಿಗೆದಾರರು ಹೇಳಿತ್ತಿದ್ದು ಬಾಡಿಗೆ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. </blockquote><span class="attribution">ಜಿ.ಸೀನಯ್ಯ ವಿಭಾಗಿಯ ನಿಯಂತ್ರಣಾಧಿಕಾರಿ ಕೆಎಸ್ಆರ್ಟಿಸಿ ಕೊಪ್ಪಳ</span></div>.<div><blockquote>ಕೆಲವು ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಂಟೀನ್ ಹಾಗೂ ಕುಡಿಯುವ ನೀರು ಪ್ರಾರಂಭಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು </blockquote><span class="attribution">ಶಂಕರ್ ಭಂಡಾರಿ ಸ್ಥಳೀಯ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು</strong>: ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್ನಿಲ್ದಾಣದ ಕ್ಯಾಂಟೀನ್ ಕಳೆದ 10 ತಿಂಗಳಿಂದ ಬಂದ್ ಆಗಿದ್ದು, ಪ್ರಯಾಣಿಕರು ಹಾಗೂ ಸಾರಿಗೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ, ಉಪಾಹಾರ, ಊಟಕ್ಕಾಗಿ ಬಸ್ನಿಲ್ದಾಣದ ಹೊರಗಿನ ಹೋಟೆಲ್ಗಳನ್ನು ಹುಡುಕಿ ಹೋಗುವಂತಾಗಿದೆ.</p>.<p>ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಿದೆ.</p>.<p>ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ ಬಂದ್ ಆಗಲು ದುಬಾರಿ ಬಾಡಿಗೆಯೇ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಬಾಡಿಗೆದಾರ ಮಾಸಿಕ ₹22,369 ಬಾಡಿಗೆಯಲ್ಲಿ ಕ್ಯಾಂಟೀನ್ ನೀಡಲಾಗಿತ್ತು. ವಿದ್ಯುತ್ ಬಿಲ್ ಹಾಗೂ ಇತರ ಖರ್ಚುಗಳು ಸೇರಿ ಮಾಸಿಕ ₹30 ಸಾವಿರ ವರೆಗೆ ಖರ್ಚು ತಗಲುತ್ತಿತ್ತು. ಹಿಂದಿನ ಬಾಡಿಗೆದಾರರು ಬಾಡಿಗೆ ಕಟ್ಟಲಾಗದೆ ಬೇರೆ ಕಡೆ ಹೋಗಿದ್ದಾರೆ.</p>.<p>ಈಗಾಗಲೇ ಮೂರು ಬಾರಿ ಟೆಂಡರ್ ಕರೆದರೂ ದುಬಾರಿ ಬಾಡಿಗೆ ಹಿನ್ನೆಲೆಯಲ್ಲಿ ಯಾರೊಬ್ಬರೂ ಟೆಂಡರ್ ಹಾಕುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.</p>.<p>ಕ್ಯಾಂಟೀನ್ ಬಂದ್ ಆಗಿದ್ದರಿಂದ ಬೇರೆ ಗ್ರಾಮಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಮನೆಯಿಂದ ಊಟ ಮಾಡಿಕೊಂಡು ಬರಬೇಕಿದೆ. ಇನ್ನು ಬಸ್ ನಿಲ್ದಾಣ ಸಮೀಪದಲ್ಲಿನ ಹೊಟೇಲ್ಗಳಿಗೆ ಹೋದರೆ ಬಸ್ ಕೈ ತಪ್ಪುತ್ತದೆ. ಈ ಕಾರಣಕ್ಕೆ ಪ್ರಯಾಣಿಕರು ನಿಲ್ದಾಣದಲ್ಲಿನ ಬೇಕರಿಗಳಲ್ಲಿ ತಿನಿಸುಗಳನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳು, ಕ್ಯಾಂಟೀನ್ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.</p>.<p>ಕುಡಿಯುವ ನೀರಿನ ಮರಿಚಿಕೆ: ನಿಲ್ದಾಣದಲ್ಲಿ ಕುಡಿಯುವ ನೀರು ಇಲ್ಲದಂತಾಗಿದೆ. ಎಷ್ಟೋ ಬಾರಿ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಿಳಿಸಿದರು ಏನು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.</p>.<p>ತಾಲ್ಲೂಕಿನ ಕುಕನೂರು, ಬನ್ನಿಕೊಪ್ಪ, ಮಸಬ ಹಂಚಿನಾಳ, ಮಂಗಳೂರು ಹೀಗೆ ಪ್ರಮುಖ ಗ್ರಾಮಗಳ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ಗಳು ಬಂದಾಗಿವೆ. ಉದ್ಘಾಟನೆ ಆದಗಿನಿಂದಲೂ ಪ್ರಾರಂಭವಾಗದೇ ಇರುವುದು ದುರಂತ.</p>.<p>ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ದುಬಾರಿ ಬಾಡಿಗೆಯನ್ನು ಕಡಿತಗೊಳಿಸಿ ಕಡಿಮೆ ಬಾಡಿಗೆಯಲ್ಲಿ ಕ್ಯಾಂಟೀನ್ಗಳನ್ನು ನೀಡಿದಾಗ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎನ್ನುತ್ತಾರೆ ಪ್ರಯಾಣಿಕರು.</p>.<div><blockquote>ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ಗಳ ಬಾಡಿಗೆ ದುಬಾರಿಯಾಗಿದೆ ಎಂದು ಬಾಡಿಗೆದಾರರು ಹೇಳಿತ್ತಿದ್ದು ಬಾಡಿಗೆ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. </blockquote><span class="attribution">ಜಿ.ಸೀನಯ್ಯ ವಿಭಾಗಿಯ ನಿಯಂತ್ರಣಾಧಿಕಾರಿ ಕೆಎಸ್ಆರ್ಟಿಸಿ ಕೊಪ್ಪಳ</span></div>.<div><blockquote>ಕೆಲವು ದಿನಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯಾಂಟೀನ್ ಹಾಗೂ ಕುಡಿಯುವ ನೀರು ಪ್ರಾರಂಭಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು </blockquote><span class="attribution">ಶಂಕರ್ ಭಂಡಾರಿ ಸ್ಥಳೀಯ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>