<p><strong>ಕುಷ್ಟಗಿ:</strong> ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ತೋಗರಿ ಮಾರಾಟ ಜೋರಾಗಿದ್ದು, ತೂಕದಲ್ಲಿ ರೈತರಿಗೆ ವ್ಯಾಪಾರಿಗಳು ಅನ್ಯಾಯ ಮಾಡುತ್ತಿದ್ದಾರೆ’ ಎಂದು ರೈತ ಬಸವರಾಜ ನಾಯಕ ಸೇರಿದಂತೆ ಇತರರು ದೂರಿದ್ದಾರೆ.</p>.<p>ತೊಗರಿಯನ್ನು ಗೋಣಿ ಚೀಲದ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಳ್ಳಲಾಗುತ್ತಿದೆ. ಈ ಚೀಲ ಸುಮಾರು ನೂರು ಗ್ರಾಂ ತೂಕ ಇದ್ದರೂ ಪ್ರತಿ ಚೀಲಕ್ಕೆ ಅರ್ಧ ಕೆಜಿಯಷ್ಟು ತೊಗರಿಯನ್ನು ಕಡಿಮೆ ಮಾಡಲಾಗುತ್ತಿದೆ. ಕೇಳಿದರೆ ಅದು ಚೀಲದ ತೂಕಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.</p>.<p>ಪ್ರತಿ ಚೀಲಕ್ಕೆ ಅರ್ಧ ಕೆಜಿ ಕಡಿತ ಮಾಡುತ್ತಿರುವುದರಿಂದ ರೈತರಿಗೆ ಹಾನಿಯಾಗುತ್ತಿದೆ. ಈ ವಿಷಯ ಎಪಿಎಂಸಿ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕುರಿತು ಮೇಲಾಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.</p>.<p>ಎಪಿಎಂಸಿ ಕಾರ್ಯದರ್ಶಿ ಅಶೋಕ ತಂಗನೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಬೈಲಾ ನಿಯಮಗಳ ಪ್ರಕಾರ ಚೀಲದ ತೂಕಕ್ಕೆ ಸಮನವಾಗಿ ಯಾವುದೇ ಹುಟ್ಟುವಳಿಯನ್ನು ಕಡಿತಮಾಡಬೇಕು. ಈ ಬಗ್ಗೆ ಕಳೆದ ವರ್ಷವೇ ವರ್ತಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಮತ್ತೊಮ್ಮೆ ನೋಟಿಸ್ ನೀಡಿ ತಾಕೀತು ಮಾಡುತ್ತೇನೆ. ನಿಯಮ ಅನುಸರಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಷ್ಟಗಿ:</strong> ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ತೋಗರಿ ಮಾರಾಟ ಜೋರಾಗಿದ್ದು, ತೂಕದಲ್ಲಿ ರೈತರಿಗೆ ವ್ಯಾಪಾರಿಗಳು ಅನ್ಯಾಯ ಮಾಡುತ್ತಿದ್ದಾರೆ’ ಎಂದು ರೈತ ಬಸವರಾಜ ನಾಯಕ ಸೇರಿದಂತೆ ಇತರರು ದೂರಿದ್ದಾರೆ.</p>.<p>ತೊಗರಿಯನ್ನು ಗೋಣಿ ಚೀಲದ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಳ್ಳಲಾಗುತ್ತಿದೆ. ಈ ಚೀಲ ಸುಮಾರು ನೂರು ಗ್ರಾಂ ತೂಕ ಇದ್ದರೂ ಪ್ರತಿ ಚೀಲಕ್ಕೆ ಅರ್ಧ ಕೆಜಿಯಷ್ಟು ತೊಗರಿಯನ್ನು ಕಡಿಮೆ ಮಾಡಲಾಗುತ್ತಿದೆ. ಕೇಳಿದರೆ ಅದು ಚೀಲದ ತೂಕಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.</p>.<p>ಪ್ರತಿ ಚೀಲಕ್ಕೆ ಅರ್ಧ ಕೆಜಿ ಕಡಿತ ಮಾಡುತ್ತಿರುವುದರಿಂದ ರೈತರಿಗೆ ಹಾನಿಯಾಗುತ್ತಿದೆ. ಈ ವಿಷಯ ಎಪಿಎಂಸಿ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕುರಿತು ಮೇಲಾಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.</p>.<p>ಎಪಿಎಂಸಿ ಕಾರ್ಯದರ್ಶಿ ಅಶೋಕ ತಂಗನೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಬೈಲಾ ನಿಯಮಗಳ ಪ್ರಕಾರ ಚೀಲದ ತೂಕಕ್ಕೆ ಸಮನವಾಗಿ ಯಾವುದೇ ಹುಟ್ಟುವಳಿಯನ್ನು ಕಡಿತಮಾಡಬೇಕು. ಈ ಬಗ್ಗೆ ಕಳೆದ ವರ್ಷವೇ ವರ್ತಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಮತ್ತೊಮ್ಮೆ ನೋಟಿಸ್ ನೀಡಿ ತಾಕೀತು ಮಾಡುತ್ತೇನೆ. ನಿಯಮ ಅನುಸರಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>