'ನೀವು ಒಳ್ಳೆಯ ಕೆಲಸ ಮಾಡಿ ರೈತರಿಗೆ ನೆರವಾಗುತ್ತಿದ್ದೀರಿ. ನಿಮ್ಮ ಮೇಲೆ ಯಾವುದೇ ದೂರುಗಳು ಇಲ್ಲ' ಎಂದೆ ಒಂದೆಡೆ ಮುಖಸ್ತುತಿ ಮಾಡುತ್ತಿರುವ ಕೆಲ ರಾಜಕಾರಣಿಗಳು ಇನ್ನೊಂದೆಡೆ ರಾಜಧಾನಿಯಲ್ಲಿ
ಠಿಕಾಣಿ ಹೂಡಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವ ದಂಧೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರು ರಸಗೊಬ್ಬರ ಸೇರಿದಂತೆ ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿಯೇ ಅಧಿಕಾರಿಗಳ ವರ್ಗಾವಣೆ
ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ದೂರಿದ್ದಾರೆ.