ಮಠದಲ್ಲಿ ಕಾರ್ತಿಕ ದಾಮೋದರನಿಗೆ ಲಕ್ಷ ತುಳಸಿಯಿಂದ ಅರ್ಚನೆ ಮಾಡಲಾಯಿತು. ಸುಪ್ರಭಾತ, ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀನಿವಾಸ ಕಲ್ಯಾಣ ಪಾರಾಯಣ, ಗ್ರಾಮ ಪ್ರದಕ್ಷಣೆ, ನೈವೇದ್ಯ, ಹಸ್ತೋದಕ, ಬೆಂಗಳೂರಿನ ಅಂಬರೀಷಾಚಾರ್ ಅವರಿಂದ ಪ್ರವಚನ, ಹುಬ್ಬಳ್ಳಿಯ ಕೃಷ್ಣೇಂದ್ರ ವಾಡೇಕರ್ ಅವರಿಂದ ಭಕ್ತಿ ಸಂಗೀತ ಮತ್ತು ದಿಪೋತ್ಸವ ಹಮ್ಮಿಕೊಳ್ಳಲಾಗಿತ್ತು.