‘ನಿವೃತ್ತ ಸೈನಿಕ ಮತ್ತು ಮಾವನವರಾದ ಹನುಮಂತಪ್ಪ, ಬೇವಿನಮಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಎಚ್.ನದಾಫ್ ಅವರ ಪ್ರೇರಣೆ ಮತ್ತು ತಂದೆ-ತಾಯಿಯವರ ಆಶೀರ್ವಾದದಿಂದ ಎಸ್ಎಸ್ಬಿ ಸೇರಲು ಸಾಧ್ಯವಾಗಿದೆ. ಶನಿವಾರ ಹೈದರಾಬಾದ್ ಮೂಲಕ ಅಸ್ಸಾಂ ರಾಜ್ಯಕ್ಕೆ ತೆರಳಿ, ಅಲ್ಲಿ ಸೇವೆಗೆ ಹಾಜರಾಗುವೆ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.