<p><strong>ಕನಕಗಿರಿ</strong>: ಸಮೀಪದ ಕೆ.ಕಾಟಾಪುರ ಗ್ರಾಮದ ಲಕ್ಷ್ಮಿ ಪಚ್ಚೇರ್ ಅವರು ಸಶಸ್ತ್ರ ಸೀಮಾ ಬಲಕ್ಕೆ (ಎಸ್ಎಸ್ಬಿ) ನೇಮಕವಾಗಿದ್ದಾರೆ. ಕುಮಾರೆಪ್ಪ ಹಾಗೂ ಶಂಕ್ರಮ್ಮ ದಂಪತಿಯ ನಾಲ್ವರು ಮಕ್ಕಳಲ್ಲಿ ಲಕ್ಷ್ಮಿ ಕೂಡ ಒಬ್ಬರು.</p>.<p>ಕುಮಾರೆಪ್ಪ ಕುಟುಂಬಕ್ಕೆ ಒಂದು ಎಕರೆ ಭೂಮಿ ಇದೆ. ಜೀವನ ಸಾಗಿಸಲು ಜೀರಾಳದ ಸಾಹುಕಾರರೊಬ್ಬರ ಹೊಲದಲ್ಲಿ ಕೂಲಿ ಕೆಲಸ ಮಾಡಿ, ಎರಡು ವರ್ಷದ ಹಿಂದೆ ಸ್ವಗ್ರಾಮ ಕಾಟಾಪುರಕ್ಕೆ ಬಂದಿದ್ದಾರೆ. ಲಕ್ಷ್ಮಿ ಅವರು ಕಾಟಾಪುರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.</p>.<p>ಆರ್ಥಿಕ ಸಮಸ್ಯೆ ಕಾರಣ ನಂತರ ತಮ್ಮ ಸೋದರ ಮಾವನ ಮನೆಯಲ್ಲಿ ಉಳಿದು, ಹುನಗುಂದ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ಪ್ರೌಢಶಾಲೆ ಶಿಕ್ಷಣ, ಇಳಕಲ್ ಮತ್ತು ಹುನಗುಂದ್ನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದಿದ್ದಾರೆ.</p>.<p>2019ರಲ್ಲಿ ಎಸ್ಎಸ್ಬಿ ಪರೀಕ್ಷೆ ಬರೆದಿದ್ದು, 2021ರ ಫೆ.22ರಂದು ನೇಮಕಾತಿ ಆದೇಶ ಬಂದಿದೆ. ಕಡು ಬಡತನದಲ್ಲೇ ಅಧ್ಯಯನ ಮಾಡಿ ಈ ಹುದ್ದೆಗೆ ಆಯ್ಕೆಯಾಗಿರುವ ಲಕ್ಷ್ಮಿ ಕಬಡ್ಡಿ ಆಟಗಾರ್ತಿ. ಪ್ರೌಢಶಾಲೆ ಹಂತದಲ್ಲೇ ಮೂರು ಸಲ ರಾಜ್ಯಮಟ್ಟದಲ್ಲಿ ಕಬಡ್ಡಿ ಆಡಿದ್ದಾರೆ.</p>.<p>‘ನಿವೃತ್ತ ಸೈನಿಕ ಮತ್ತು ಮಾವನವರಾದ ಹನುಮಂತಪ್ಪ, ಬೇವಿನಮಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಎಚ್.ನದಾಫ್ ಅವರ ಪ್ರೇರಣೆ ಮತ್ತು ತಂದೆ-ತಾಯಿಯವರ ಆಶೀರ್ವಾದದಿಂದ ಎಸ್ಎಸ್ಬಿ ಸೇರಲು ಸಾಧ್ಯವಾಗಿದೆ. ಶನಿವಾರ ಹೈದರಾಬಾದ್ ಮೂಲಕ ಅಸ್ಸಾಂ ರಾಜ್ಯಕ್ಕೆ ತೆರಳಿ, ಅಲ್ಲಿ ಸೇವೆಗೆ ಹಾಜರಾಗುವೆ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತಹಶೀಲ್ದಾರ್ ರವಿ ಅಂಗಡಿ ಅವರು ಶುಕ್ರವಾರ ಲಕ್ಷ್ಮಿಯ ಮನೆಗೆ ತೆರಳಿ ಸಿಹಿ ತಿನ್ನಿಸಿ, ಆರ್ಥಿಕ ನೆರವು ನೀಡಿದರು. ಅವರನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಸನ್ಮಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ</strong>: ಸಮೀಪದ ಕೆ.ಕಾಟಾಪುರ ಗ್ರಾಮದ ಲಕ್ಷ್ಮಿ ಪಚ್ಚೇರ್ ಅವರು ಸಶಸ್ತ್ರ ಸೀಮಾ ಬಲಕ್ಕೆ (ಎಸ್ಎಸ್ಬಿ) ನೇಮಕವಾಗಿದ್ದಾರೆ. ಕುಮಾರೆಪ್ಪ ಹಾಗೂ ಶಂಕ್ರಮ್ಮ ದಂಪತಿಯ ನಾಲ್ವರು ಮಕ್ಕಳಲ್ಲಿ ಲಕ್ಷ್ಮಿ ಕೂಡ ಒಬ್ಬರು.</p>.<p>ಕುಮಾರೆಪ್ಪ ಕುಟುಂಬಕ್ಕೆ ಒಂದು ಎಕರೆ ಭೂಮಿ ಇದೆ. ಜೀವನ ಸಾಗಿಸಲು ಜೀರಾಳದ ಸಾಹುಕಾರರೊಬ್ಬರ ಹೊಲದಲ್ಲಿ ಕೂಲಿ ಕೆಲಸ ಮಾಡಿ, ಎರಡು ವರ್ಷದ ಹಿಂದೆ ಸ್ವಗ್ರಾಮ ಕಾಟಾಪುರಕ್ಕೆ ಬಂದಿದ್ದಾರೆ. ಲಕ್ಷ್ಮಿ ಅವರು ಕಾಟಾಪುರದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.</p>.<p>ಆರ್ಥಿಕ ಸಮಸ್ಯೆ ಕಾರಣ ನಂತರ ತಮ್ಮ ಸೋದರ ಮಾವನ ಮನೆಯಲ್ಲಿ ಉಳಿದು, ಹುನಗುಂದ ತಾಲ್ಲೂಕಿನ ಬೇವಿನಮಟ್ಟಿಯಲ್ಲಿ ಪ್ರೌಢಶಾಲೆ ಶಿಕ್ಷಣ, ಇಳಕಲ್ ಮತ್ತು ಹುನಗುಂದ್ನಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದಿದ್ದಾರೆ.</p>.<p>2019ರಲ್ಲಿ ಎಸ್ಎಸ್ಬಿ ಪರೀಕ್ಷೆ ಬರೆದಿದ್ದು, 2021ರ ಫೆ.22ರಂದು ನೇಮಕಾತಿ ಆದೇಶ ಬಂದಿದೆ. ಕಡು ಬಡತನದಲ್ಲೇ ಅಧ್ಯಯನ ಮಾಡಿ ಈ ಹುದ್ದೆಗೆ ಆಯ್ಕೆಯಾಗಿರುವ ಲಕ್ಷ್ಮಿ ಕಬಡ್ಡಿ ಆಟಗಾರ್ತಿ. ಪ್ರೌಢಶಾಲೆ ಹಂತದಲ್ಲೇ ಮೂರು ಸಲ ರಾಜ್ಯಮಟ್ಟದಲ್ಲಿ ಕಬಡ್ಡಿ ಆಡಿದ್ದಾರೆ.</p>.<p>‘ನಿವೃತ್ತ ಸೈನಿಕ ಮತ್ತು ಮಾವನವರಾದ ಹನುಮಂತಪ್ಪ, ಬೇವಿನಮಟ್ಟಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ಎಚ್.ನದಾಫ್ ಅವರ ಪ್ರೇರಣೆ ಮತ್ತು ತಂದೆ-ತಾಯಿಯವರ ಆಶೀರ್ವಾದದಿಂದ ಎಸ್ಎಸ್ಬಿ ಸೇರಲು ಸಾಧ್ಯವಾಗಿದೆ. ಶನಿವಾರ ಹೈದರಾಬಾದ್ ಮೂಲಕ ಅಸ್ಸಾಂ ರಾಜ್ಯಕ್ಕೆ ತೆರಳಿ, ಅಲ್ಲಿ ಸೇವೆಗೆ ಹಾಜರಾಗುವೆ’ ಎಂದು ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತಹಶೀಲ್ದಾರ್ ರವಿ ಅಂಗಡಿ ಅವರು ಶುಕ್ರವಾರ ಲಕ್ಷ್ಮಿಯ ಮನೆಗೆ ತೆರಳಿ ಸಿಹಿ ತಿನ್ನಿಸಿ, ಆರ್ಥಿಕ ನೆರವು ನೀಡಿದರು. ಅವರನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಸನ್ಮಾನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>