ಕೊಪ್ಪಳ: ಬ್ರಿಟಿಷರ ವಿರುದ್ಧ ಅಂದು ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯಡಿ ಆರಂಭವಾದ ಹೋರಾಟದ ಮಾದರಿಯಲ್ಲಿ ಇಂದು ದೇಶವನ್ನು ಅಳುತ್ತಿರುವ ಜೀವ ವಿರೋಧಿ, ಜನ ವಿರೋಧಿ ಸರ್ಕಾರಗಳನ್ನು ಅಧಿಕಾರದಿಂದ ತೊಲಗಿಸಲು ಜನಾಂದೋಲನಾ ರೂಪಿಸಲು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿ ನಿರ್ದೇಶನದಂತೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದುಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
ನಗರದತಹಶೀಲ್ದಾರ್ ಕಚೇರಿ ಆವರಣದಲ್ಲಿಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸಿಪಿಐ ಇದರ ನೇತೃತ್ವ ವಹಿಸಿದ್ದರು.
ಮಹಿಳೆಯರ ಬಗ್ಗೆ ಉದ್ದುದ್ದ ಮಾತನಾಡುವ ಸರ್ಕಾರ, ಅವರಿಗೆ ತೀರಾ ಕಡಿಮೆ ಕೂಲಿ ನೀಡಿ ಶೋಷಣೆ ಮಾಡುತ್ತಿದೆ.ಕೊರೊನಾ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಹಲವಾರು ಸಮಸ್ಯೆ ಎದುರಿಸಿದ ಮುಗ್ದ ಜನರು ಜೀವ ಕಳೆದುಕೊಂಡರು. ಶಾಲೆಗಳು ಮುಚ್ಚಿ, ಆನ್ ಲೈನ್, ನೆಟ್ ವರ್ಕ್ ಸಮಸ್ಯೆಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.