<p>ಗಂಗಾವತಿ: ‘ತಾಲ್ಲೂಕಿನ ಆನೆಗೊಂದಿ, ಮಲ್ಲಾಪುರ ಭಾಗದಲ್ಲಿ ಭೋವಿ ಸಮಾಜದವರು ಕಲ್ಲು ಒಡೆಯುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಕಲ್ಲು ಒಡೆಯಲು ಅವಕಾಶ ಕಲ್ಪಿಸಬೇಕು’ ಎಂದು ಭೋವಿ ಸಮುದಾಯದವರು ತಹಶೀಲ್ದಾರ್ ನಾಗರಾಜ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ತಾಲ್ಲೂಕಿನ ಸುತ್ತಮುತ್ತ ಭೋವಿ ಸಮಾಜ ನಲವತ್ತು ವರ್ಷಗಳಿಂದ ಕಲ್ಲು ಒಡೆಯುವ ಕಾಯಕ ಮಾಡುತ್ತ ಬಂದಿದೆ. ಮನೆ ನಿರ್ಮಾಣಕ್ಕೆ ಸೈಜ್, ರಬ್ಬರ್, ಜೆಲ್ಲಿ ಕಲ್ಲಿನ ಅವಶ್ಯಕ. ಆದ್ದರಿಂದ ಹೊಟ್ಟೆ ಪಾಡಿಗಾಗಿ ಭೋವಿ ಸಮಾಜ ಕಲ್ಲು ಒಡೆಯುವುದರಲ್ಲಿ ನಿರತವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.</p>.<p>ಆನೆಗೊಂದಿ, ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ಮಲ್ಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಭೋವಿ ಸಮಾಜ ಕಲ್ಲು ಒಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಕಲ್ಲು ಒಡೆಯುವುದನ್ನು ನಿರ್ಬಂಧಿಸಿದ್ದಾರೆ. ಇದೆ ವೃತ್ತಿಯನ್ನು ನಂಬಿದ ಬಡ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದಿದ್ದಾರೆ.</p>.<p>ಭೋವಿ ಸಮಾಜ ಕಲ್ಲು ಗಣಿಗಾರಿಕೆಯ ಜತೆಗೆ ಬೃಹತ್ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಇವೆಲ್ಲ ಸುಳ್ಳು. ಉಳ್ಳವರ ಕೈ ಚಳಕವೇ ಹೊರತು, ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ ಬಡ ಜನರ ಕಾರ್ಯವಲ್ಲ ಇದು ಎಂದು ಹೇಳಿದ್ದಾರೆ.</p>.<p>ಈ ವಿಷಯವನ್ನು ಶಾಸಕರರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಮರಳಿ ಕಲ್ಲು ಒಡೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಭೋವಿ ಸಮಾಜದವರು ತಹಶೀಲ್ದಾರರಿಗೆ ನೀಡಿದ ಮನವಿ ತಿಳಿಸಿದ್ದಾರೆ.</p>.<p>ಭೋವಿ ಸಮಾಜದ ಮುಖಂಡರಾದ ರಾಮಕೃಷ್ಣ, ಲೋಕೇಶ, ವೈರಿಮಣಿ, ಹೇಮಣ್ಣ, ಸತ್ಯವೇಲು, ಚಂದ್ರು, ಗುನ್ನೆಪ್ಪ, ದೇವರಾಜ, ಗೋಪಿ, ವಿಶ್ವ, ತ್ಯಾಗರಾಜ, ಹುಲ್ಲೇಶ, ಪರಸಪ್ಪ, ಶ್ರೀನಿವಾಸ, ಅಂಜಿನಪ್ಪ, ರಾಜು, ರಾಮು ಹಾಗೂ ಯುವ ಮುಖಂಡ ನಾಗರಾಜ ಚಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ‘ತಾಲ್ಲೂಕಿನ ಆನೆಗೊಂದಿ, ಮಲ್ಲಾಪುರ ಭಾಗದಲ್ಲಿ ಭೋವಿ ಸಮಾಜದವರು ಕಲ್ಲು ಒಡೆಯುವ ಮೂಲಕ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಕಲ್ಲು ಒಡೆಯಲು ಅವಕಾಶ ಕಲ್ಪಿಸಬೇಕು’ ಎಂದು ಭೋವಿ ಸಮುದಾಯದವರು ತಹಶೀಲ್ದಾರ್ ನಾಗರಾಜ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ತಾಲ್ಲೂಕಿನ ಸುತ್ತಮುತ್ತ ಭೋವಿ ಸಮಾಜ ನಲವತ್ತು ವರ್ಷಗಳಿಂದ ಕಲ್ಲು ಒಡೆಯುವ ಕಾಯಕ ಮಾಡುತ್ತ ಬಂದಿದೆ. ಮನೆ ನಿರ್ಮಾಣಕ್ಕೆ ಸೈಜ್, ರಬ್ಬರ್, ಜೆಲ್ಲಿ ಕಲ್ಲಿನ ಅವಶ್ಯಕ. ಆದ್ದರಿಂದ ಹೊಟ್ಟೆ ಪಾಡಿಗಾಗಿ ಭೋವಿ ಸಮಾಜ ಕಲ್ಲು ಒಡೆಯುವುದರಲ್ಲಿ ನಿರತವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.</p>.<p>ಆನೆಗೊಂದಿ, ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ಮಲ್ಲಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ಭೋವಿ ಸಮಾಜ ಕಲ್ಲು ಒಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.</p>.<p>ಕಲ್ಲು ಗಣಿಗಾರಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಕಲ್ಲು ಒಡೆಯುವುದನ್ನು ನಿರ್ಬಂಧಿಸಿದ್ದಾರೆ. ಇದೆ ವೃತ್ತಿಯನ್ನು ನಂಬಿದ ಬಡ ಕುಟುಂಬಗಳು ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದಿದ್ದಾರೆ.</p>.<p>ಭೋವಿ ಸಮಾಜ ಕಲ್ಲು ಗಣಿಗಾರಿಕೆಯ ಜತೆಗೆ ಬೃಹತ್ ಬಂಡೆಗಳನ್ನು ಬ್ಲಾಸ್ಟ್ ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಇವೆಲ್ಲ ಸುಳ್ಳು. ಉಳ್ಳವರ ಕೈ ಚಳಕವೇ ಹೊರತು, ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ ಬಡ ಜನರ ಕಾರ್ಯವಲ್ಲ ಇದು ಎಂದು ಹೇಳಿದ್ದಾರೆ.</p>.<p>ಈ ವಿಷಯವನ್ನು ಶಾಸಕರರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಮರಳಿ ಕಲ್ಲು ಒಡೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಅದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಭೋವಿ ಸಮಾಜದವರು ತಹಶೀಲ್ದಾರರಿಗೆ ನೀಡಿದ ಮನವಿ ತಿಳಿಸಿದ್ದಾರೆ.</p>.<p>ಭೋವಿ ಸಮಾಜದ ಮುಖಂಡರಾದ ರಾಮಕೃಷ್ಣ, ಲೋಕೇಶ, ವೈರಿಮಣಿ, ಹೇಮಣ್ಣ, ಸತ್ಯವೇಲು, ಚಂದ್ರು, ಗುನ್ನೆಪ್ಪ, ದೇವರಾಜ, ಗೋಪಿ, ವಿಶ್ವ, ತ್ಯಾಗರಾಜ, ಹುಲ್ಲೇಶ, ಪರಸಪ್ಪ, ಶ್ರೀನಿವಾಸ, ಅಂಜಿನಪ್ಪ, ರಾಜು, ರಾಮು ಹಾಗೂ ಯುವ ಮುಖಂಡ ನಾಗರಾಜ ಚಳಗೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>