ಸರ್ಕಾರ ಹಂಪಿ ಜೊತೆಗೆ ಆನೆಗೊಂದಿ ಉತ್ಸವಕ್ಕೂ ಅನುದಾನ ಬಿಡುಗಡೆ ಮಾಡಿ ಆಚರಿಸಬೇಕಿತ್ತು. ಈ ಉತ್ಸವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ
ಜಿ.ಜನಾರ್ದನರೆಡ್ಡಿ ಗಂಗಾವತಿ ಶಾಸಕ
ಅನುದಾನ ವಿಳಂಬದಿಂದ ಹಿನ್ನಡೆ
ಜಿ.ಜನಾರ್ದನರೆಡ್ಡಿ ಗಂಗಾವತಿ ಕ್ಷೇತ್ರದ ಶಾಸಕರಾದ ನಂತರ 2024ರಲ್ಲಿ ಆನೆಗೊಂದಿ ಉತ್ಸವ ತುಸು ಅದ್ದೂರಿಯಾಗಿಯೇ ನಡೆಸಲಾಗಿತ್ತು. ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ಸಹ ನೀಡುತ್ತೇನೆ ಎಂದಿದ್ದರು. ಇದೀಗ ಆನೆಗೊಂದಿ ಉತ್ಸವ ಆಚರಣೆ ಲೆಕ್ಕಸರಿ ಹೊಂದುತ್ತಿಲ್ಲ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ವಿಳಂಬ ಮಾಡಿದ್ದು ಹಿನ್ನಡೆಯಾಗಿದೆ ಎಂದು ಗೊತ್ತಾಗಿದೆ.
ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಆತ್ಮವಿದ್ದಂತೆ. ಅದನ್ನು ಬಿಟ್ಟು ಕೇವಲ ಹಂಪಿ ಉತ್ಸವ ಆಚರಣೆ ಮಾಡಿ ಆನೆಗೊಂದಿ ಉತ್ಸವ ನಿರ್ಲಕ್ಷಿಸುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಉತ್ಸವ ಆಯೋಜಿಸಬೇಕು