ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದನಗರಸಭೆಸದಸ್ಯ ಅಮ್ಜದ್ ಪಟೇಲ್ ಮಾತನಾಡಿ, ‘ವಾಲ್ಮೀಕಿ ಅವರು ರಾಮಾಯಣ ರಚನೆ ಮಾಡುವ ಮೂಲಕಜನರಿಗೆಮಾನವೀಯತೆಯ ಸಂದೇಶಸಾರಿದರು. ಭಾರತ ದೇಶದ ಮೊದಲನೇ ಕವಿ ಎಂದು ಹೆಸರಾದ ಅವರು ಸಂಸ್ಕೃತದಲ್ಲಿ ಬರೆದ ಮಹಾಕಾವ್ಯ ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ‘ ಎಂದರು.
ಗ್ರಾಮದ ಹಿರಿಯ ಕಲಾವಿದ ಮತ್ತು ಸಹಕಾರ ರಂಗದ ರಾಷ್ಟ್ರ ಪ್ರಶಸ್ತಿ ಪುರಸ್ಕತ ತೋಟಪ್ಪ ಕಾಮನೂರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಣಪ್ಪ ಕುರಿ, ಚಿನ್ನಪ್ಪರೆಡ್ಡಿ ರಡ್ಡೇರ, ಚಾಂದ್ ಪಾಷಾ ಖಿಲ್ಲೇದಾರ್, ಪಂಚಾಯಿತಿ ಉಪಾಧ್ಯಕ್ಷ ಗಾಳಪ್ಪ ಮಳ್ಳಿಕೇರಿ, ಪರಶುರಾಮ್ ಕೆರಳ್ಳಿ ಇದ್ದರು. ಶಿವಮೂರ್ತಿ ಗುತ್ತೂರು ಉಪನ್ಯಾಸ ನೀಡಿದರು.