<p><strong>ಕೊಪ್ಪಳ: </strong>ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ನವರಾತ್ರಿಯ ದುರ್ಗಾದೇವಿ ಪುರಾಣೋತ್ಸವದ ಅಂಗವಾಗಿ ದೇವಿಗೆ ಕುಂಭಾಭಿಷೇಕ, ಕುಂಭದ ಮೆರವಣಿಗೆಯು ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.</p>.<p>ಮೆರವಣಿಗೆಯುದ್ದಕ್ಕೂ ದೇವಿಯ ನಾಮಸ್ಮರಣೆ ಮಾಡುವ ಜೊತೆಗೆ ಮಕ್ಕಳು ದೇವತೆಗಳ ವೇಷ ಧರಿಸಿ ಗಮನ ಸೆಳೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.</p>.<p>ಕೋವಿಡ್ ಕಾರಣದಿಂದ ಹಿಂದಿನ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿರಲಿಲ್ಲ. ಈ ಬಾರಿ ಯಾವ ಆತಂಕವಿಲ್ಲದೆ ಜೋರಾಗಿ ನಡೆಯಿತು. ದ್ಯಾಮವ್ವ ದೇವಿ ಪುರಾಣೋತ್ಸವ ಒಂಬತ್ತು ದಿನಗಳ ಕಾಲ ನೆರವೇರಿತು. ಗಣೇಶ ಶಾಸ್ತ್ರಿಗಳು ಹಾಗೂ ಗುರುನಾಥಸ್ವಾಮಿಗಳು ಏಕದಂಡಿಗಮಠ ಅವರು 18 ಅಧ್ಯಾಯಗಳ ಪಠಿಸಿದರು.</p>.<p>ಬುಧವಾರ ಲೋಕ ಕಲ್ಯಾಣಕ್ಕಾಗಿ, ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗಾಗಿ ಕುಂಭದ ಮೆರವಣಿಗೆ ಜರುಗಿತು. ಮುದ್ದಾಂಬಿಕಾ ದೇವಿ, ಅನ್ನಪೂಣೇಶ್ವರಿ ದೇವಿ, ಕಾಳಿಕಾ ದೇವಿ ಹಾಗೂ ದ್ಯಾಮವ್ವ ದೇವಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಫಕೀರೇಶ್ವರ ಸ್ವಾಮೀಜಿ, ಶೇಖರಯ್ಯ ಹಿರೇಮಠ, ಗಣೇಶ ಶಾಸ್ತ್ರಿಗಳು ಅಭಿಷೇಕ ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ನವರಾತ್ರಿಯ ದುರ್ಗಾದೇವಿ ಪುರಾಣೋತ್ಸವದ ಅಂಗವಾಗಿ ದೇವಿಗೆ ಕುಂಭಾಭಿಷೇಕ, ಕುಂಭದ ಮೆರವಣಿಗೆಯು ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.</p>.<p>ಮೆರವಣಿಗೆಯುದ್ದಕ್ಕೂ ದೇವಿಯ ನಾಮಸ್ಮರಣೆ ಮಾಡುವ ಜೊತೆಗೆ ಮಕ್ಕಳು ದೇವತೆಗಳ ವೇಷ ಧರಿಸಿ ಗಮನ ಸೆಳೆದರು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.</p>.<p>ಕೋವಿಡ್ ಕಾರಣದಿಂದ ಹಿಂದಿನ ವರ್ಷ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿರಲಿಲ್ಲ. ಈ ಬಾರಿ ಯಾವ ಆತಂಕವಿಲ್ಲದೆ ಜೋರಾಗಿ ನಡೆಯಿತು. ದ್ಯಾಮವ್ವ ದೇವಿ ಪುರಾಣೋತ್ಸವ ಒಂಬತ್ತು ದಿನಗಳ ಕಾಲ ನೆರವೇರಿತು. ಗಣೇಶ ಶಾಸ್ತ್ರಿಗಳು ಹಾಗೂ ಗುರುನಾಥಸ್ವಾಮಿಗಳು ಏಕದಂಡಿಗಮಠ ಅವರು 18 ಅಧ್ಯಾಯಗಳ ಪಠಿಸಿದರು.</p>.<p>ಬುಧವಾರ ಲೋಕ ಕಲ್ಯಾಣಕ್ಕಾಗಿ, ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗಾಗಿ ಕುಂಭದ ಮೆರವಣಿಗೆ ಜರುಗಿತು. ಮುದ್ದಾಂಬಿಕಾ ದೇವಿ, ಅನ್ನಪೂಣೇಶ್ವರಿ ದೇವಿ, ಕಾಳಿಕಾ ದೇವಿ ಹಾಗೂ ದ್ಯಾಮವ್ವ ದೇವಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ನೆರವೇರಿಸಲಾಯಿತು. ಫಕೀರೇಶ್ವರ ಸ್ವಾಮೀಜಿ, ಶೇಖರಯ್ಯ ಹಿರೇಮಠ, ಗಣೇಶ ಶಾಸ್ತ್ರಿಗಳು ಅಭಿಷೇಕ ನೆರವೇರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>