ಕೊಪ್ಪಳ: ಕಳೆದ ತಿಂಗಳು ಗದಗದಲ್ಲಿ ಪೋಷಕರ ಜೊತೆ ಹತ್ಯೆಗೀಡಾದ ಇಲ್ಲಿನ ಆಕಾಂಕ್ಷಾಗೆ ಎಸ್ಎಸ್ಎಲ್ಸಿಯಲ್ಲಿ 369 ಅಂಕಗಳು ಲಭಿಸಿವೆ.
ಕುಟುಂಬದ ವೈಷಮ್ಯಕ್ಕೆ ನಡೆದಿದ್ದ ಕೃತ್ಯದಲ್ಲಿ ಕೊಪ್ಪಳದ ಮೂವರು ಸೇರಿ ನಾಲ್ಕು ಜನರ ಕೊಲೆಯಾಗಿತ್ತು. ಅದರಲ್ಲಿ ಆಕಾಂಕ್ಷಾ ಹಾಗೂ ಅವರ ಪೋಷಕರೂ ಸೇರಿದ್ದರು. ಇಲ್ಲಿನ ಪಯೋನಿಯರ್ ಶಾಲೆಯಲ್ಲಿ ಓದುತ್ತಿದ್ದ ಆ ವಿದ್ಯಾರ್ಥಿನಿ ಉತ್ತಮ ಅಂಕಗಳನ್ನು ಪಡೆದಿದ್ದಾಳೆ.
ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಮನೆಯಲ್ಲೇ ಅವರ ನಡೆದ ಹತ್ಯೆಯಲ್ಲಿ ಆಕಾಂಕ್ಷಾ ಅವರ ಪೋಷಕರ ಸಹಿತ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.