ವ್ಯಾಪಾರಸ್ಥೆ ಗಂಗಮ್ಮ ಮಾತನಾಡಿ' ಕಳೆದ ಹತ್ತು ತಿಂಗಳ ಕೆಳಗೆ ನಮ್ಮನ್ನು ಸಾರ್ವಜನಿಕ ಮೈದಾನದಿಂದ ಒಕ್ಕಲೆಬ್ಬಿಸಲಾಯಿತು. ಅಲ್ಲಿಂದ ಈ ಮಾರುಕಟ್ಟೆಗೆ ಬಂದ ನಾವು ಇಲ್ಲೇ ವ್ಯಾಪಾರ ಮಾಡುತ್ತಿದ್ದೆವು. ಬಯಲಿನಲ್ಲಿ ವ್ಯಾಪಾರ ಮಾಡುತ್ತಿದ್ದರಿಂದ ಮಳೆ, ಬಿಸಿಲಿಗೆ ತರಕಾರಿ ಹಾಳಾಗುತ್ತಿತ್ತು. ಆದ್ದರಿಂದ ಖಾಲಿ ಇದ್ದ ಈ ನೂತನ ಮಳಿಗೆಗಳಲ್ಲಿ ಅವುಗಳನ್ನು ಇಡುತ್ತಿದ್ದೆವು. ನಗರಸಭೆ ಸಿಬ್ಬಂದಿ ಏಕಾಏಕಿ ಸ್ಥಳಕ್ಕಾಗಮಿಸಿ ನಮ್ಮ ತರಕಾರಿ, ಸಾಮಾನುಗಳನ್ನು ಹೊರಗೆಸೆದು ದರ್ಪ ತೋರುತ್ತಿದ್ದಾರೆ. ಒಂದು ದಿನ ಮುಂಚಿತವಾಗಿ ಹೇಳಿದ್ದರೆ ನಾವೇ ಖಾಲಿ ಮಾಡುತ್ತಿದ್ದೆವು. ತರಕಾರಿ ಹೊರಗೆಸೆದಿರುವುದರಿಂದ ಅವು ಹಾಳಾಗಿವೆ' ಎಂದು ತಮ್ಮ ಅಳಲು ತೋಡಿಕೊಂಡರು.