ಕಾರಟಗಿ: ಪಟ್ಟಣದಲ್ಲಿ ಮಧ್ಯಾಹ್ನದ ಬಳಿಕ ಅರ್ಧ ಗಂಟೆಯವರೆಗೂ ಗುಡುಗು ಸಹಿತ ಮಳೆ ಸುರಿಯಿತು.
ಮಳೆ, ತಣ್ಣನೆಯ ಗಾಳಿಯಿಂದ ಬಿಸಿಲಿನ ಬೇಗೆಯಲ್ಲಿ ಬಳಲಿದ್ದ ಜನರಿಗೆ ತಂಪಾದ ವಾತಾವರಣ ಸೃಷ್ಟಿಸಿತ್ತು. ಸಂಜೆಯೂ ಗುಡುಗು ಸದ್ದು ಕೇಳಿಬರುತ್ತಿತ್ತು.
ತಾಲ್ಲೂಕಿನ ವಿವಿಧೆಡೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೊರಗಿ, ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಾಲ್ಲೂಕಿನ ಹುಳ್ಕಿಹಾಳ, ಬರಗೂರು, ಕೊಟ್ನೆಕಲ್, ಸಿದ್ದಾಪುರ, ಮರ್ಲಾನಹಳ್ಳಿ, ಯರಡೋಣ, ಬೂದಗುಂಪಾ, ಪನ್ನಾಪುರ ಸಹಿತ ವಿವಿಧೆಡೆ ಏಕಾಏಕಿ ಬಿರುಗಾಳಿ, ಗುಡುಗು ಸಹಿತ ಸುರಿದ ಮಳೆಗೆ ಭತ್ತದ ಬೆಳೆ ನೆಲಕ್ಕೆ ಬಾಗಿದೆ. ಭತ್ತದ ಬೆಳೆ ಹಾಲುತುಂಬಿ ತೆನೆ ಬಿಚ್ಚುವ, ಕೆಲವೆಡೆ ಕಟಾವಿಗೆ ಬಂದಿತ್ತು.
ಕೊರೊನಾ ಭೀತಿ ನಡುವೆ ಅಕಾಲಿಕ ವರುಣನ ಆಗಮನ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.