‘ಬಸವೇಶ್ವರರ ಜಯಂತಿಯನ್ನು ದೇಶವಲ್ಲದೆ, ಜಗತ್ತಿನೆಲ್ಲೆಡೆ ಆಚರಿಸಲಾಗಿದೆ. ಗಣ್ಯಾತಿಗಣ್ಯರು ಬಸವೇಶ್ವರರ ಜನ್ಮದಿನಕ್ಕೆ ಶುಭ ಕೋರಿದ್ದಾರೆ. ಆದರೆ, ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತು ಎಂದು ತೋರಿಸುವ ಮೂಲಕ ಅವರ ಸಾಮಾಜಿಕ ಕ್ರಾಂತಿಗೆ ಮಸಿ ಬಳಿಯುವ ಹುನ್ನಾರದಂತೆ ಇದು ತೋರುತ್ತಿದೆ’ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಮಾದಾರ ದೂರಿದ್ದಾರೆ.