ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಸ್ಪರ ಸಹಕಾರ ತತ್ವ ಅನುಸರಿಸಿ’

ಹಾಬಲಕಟ್ಟಿ: ಕೃಷಿ ಪತ್ತಿನ ಸಂಘ ಆರಂಭ
Last Updated 2 ಜೂನ್ 2020, 11:45 IST
ಅಕ್ಷರ ಗಾತ್ರ

ಹನುಮಸಾಗರ: ‘ಆರ್ಥಿಕವಾಗಿ ದುರ್ಬಲರಾದವರು ಸಮಾನತೆಯ ತಳಹದಿಯ ಮೇಲೆ ಸಂಘಟಿತರಾಗಿ, ಪರಸ್ಪರ ಸಹಾಯದಿಂದ ಅಭಿವೃದ್ಧಿ ಹೊಂದುವ ಉದ್ದೇಶ ಇಟ್ಟುಕೊಳ್ಳುವುದರ ಮೂಲಕ ಸಂಘದ ಅಭಿವೃದ್ಧಿಗೂ ಕೈಜೋಡಿಸಬೇಕು‘ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದಪ್ಪ ಕವಡಿಕಾಯಿ ಹೇಳಿದರು.

ಸೋಮವಾರ ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲಕರವಾಗಿದೆ. ಉತ್ಪಾದನೆಯಾದ ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತ ಮಾರಾಟ ಮಾಡುವುದರಲ್ಲೂ ಈ ಸಂಘದ ನೆರವು ದೊರಕುತ್ತದೆ. ಸಹಕಾರ ತತ್ವಗಳನ್ನು ಅನುಸರಿಸುವುದರ ಮೂಲಕ ಕೃಷಿ, ಆರ್ಥಿಕತೆ ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಜಹಗೀರಗುಡದೂರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಂಗಮೇಶ ಗುಜ್ಜಲ ಮಾತನಾಡಿ, ರೈತರಿಗೆ ಹಣಕಾಸಿನ ಸೌಲಭ್ಯ ನೀಡುವ ಸಹಕಾರಿ ವ್ಯವಸ್ಥೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ಜೀವಾಳವಾಗಿವೆ. ಸದೃಢವಾದ ಸಂಘಗಳು ಕೇವಲ ತನ್ನ ಸದಸ್ಯರಿಗೆ ಮಾತ್ರವಲ್ಲ ಊರಿಗೆ, ಸಮಾಜಕ್ಕೆ ಮತ್ತು ದೇಶಕ್ಕೂ ಆಸ್ತಿಗಳಾಗಿವೆ‘ ಎಂದರು.

ಈ ಸಹಕಾರ ಸಂಘಕ್ಕೆ ಹಾಬಲಕಟ್ಟಿ, ಗಡಚಿಂತಿ, ಮಾಸ್ತಕಟ್ಟಿ ಗ್ರಾಮಗಳಿಂದ 456 ಶೇರುದಾರರಗಿದ್ದಾರೆ ಎಂದು ಹೇಳಿದರು.


ಪ್ರಮುಖರಾದ ಮಹಾಂತೇಶ ಕಾಡದ, ರಂಗನಾಥ ಮಡಿವಾಳರ, ಸತ್ಯಪ್ಪ ರಾಜೂರು, ರೈತ ಮುಖಂಡ ಯಮನೂರಪ್ಪ ಅಬ್ಬಿಗೇರಿ, ಶಂಕರಪ್ಪ ಚಕ್ಕಡಿ, ಬಸವರಾಜ, ಗ್ರಾ.ಪಂ ಅಧ್ಯಕ್ಷ ಯಮನೂರಪ್ಪ ಭಂಜತ್ರಿ, ಶರಣಪ್ಪ ಯರಗೇರಿ, ಶರಣಪ್ಪ ಹರಿಜನ, ಕೆ.ಜಿ.ಆಲೂರು, ವೆಂಕಟೇಶ ಕಬ್ಬರಗಿ, ರಮೇಶ್ ಭೋವಿ, ಸಂಗಪ್ಪ ಸೊಬರದ, ಮೋಹನ್ ಪೂಜಾರಿ, ಶಂಕರ ಗಡಾದ, ಶಿವಶರಣಪ್ಪ ಹೆಬ್ಬುಲಿ, ಯಮನಪ್ಪ ಹುಲಿ, ಯಮನಪ್ಪ ದಳಪತಿ, ಸಂಗಪ್ಪ ಸೊಬರದ, ಯಮನೂರಪ್ಪ ದಂಡಿಮನಿ, ಮುತ್ತಣ್ಣ ಹರಿಜನ, ಸಂಗನಗೌಡ ದಳಪತಿ, ಬಾಳಪ್ಪ ನಾಗರಾಳ, ಶರಣಪ್ಪ ತಳಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT