<p><strong>ಅಳವಂಡಿ: </strong>ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಉದ್ದೇಶದಿಂದ ಎನ್ಸಿಇಆರ್ಟಿ ನಡೆಸಿದ ರಾಷ್ಟ್ರೀಯ ಪ್ರತಿಭಾ ಪುರಸ್ಕಾರ (ಎನ್ಎಂಎಂಎಸ್) ಪರೀಕ್ಷೆಯಲ್ಲಿ ಅಳವಂಡಿ ಸಮೀಪದ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಹಲವು ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಗಮನಸೆಳೆದಿದ್ದಾರೆ.</p>.<p class="Subhead"><strong>ನೀರಲಗಿ:</strong> ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ವಿದ್ಯಾರ್ಥಿಗಳು 2020-21ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆ ಹಿಂದೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಹೋಳಿಬಸಯ್ಯ ಅವರ ಶ್ರಮವಿದೆ.</p>.<p>ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ದಿನ ಸೇರಿದಂತೆ ಶನಿವಾರ ಮತ್ತು ಭಾನುವಾರವೂ ತರಗತಿಗಳನ್ನು ನಡೆಸಲಾಗಿದೆ.</p>.<p class="Subhead"><strong>ಆಯ್ಕೆಯಾದ ವಿದ್ಯಾರ್ಥಿಗಳು: </strong>ಆರ್.ಎಂ.ಶಿವುಕುಮಾರ, ಬಸವರಾಜ, ಪವಿತ್ರಾ ಐನಕ್ಕನರ, ಅಂಬಿಕಾ ಅಜ್ಜನವರ, ಪವನ ಕುಮಾರ ರಾಮನಗೌಡ, ಬಸವರಾಜ ದಡ್ಡಿನ, ಅನ್ನಪೂರ್ಣ ಯಲ್ಲಮ್ಮನವರ ಎನ್ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ.</p>.<p class="Subhead">ಮೈನಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ಬಸವರಾಜ ಚಿತ್ತಾಪುರ ಅವರ ಮಾರ್ಗದರ್ಶನದಿಂದ ಈ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಎನ್ಎಂಎಂಎಸ್ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದಾರೆ.</p>.<p>ಇದೇ ಶಾಲೆಯ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.</p>.<p>ಸ್ವಾತಿಕ ಕುರಡಗಿ (ಪ್ರಥಮ), ಸುಷ್ಮಿತಾ ಅಂಗಡಿ (ದ್ವಿತೀಯ), ಗವಿಸಿದ್ದಯ್ಯ ಕುರುವತ್ತಿಮಠ (ತೃತೀಯ) ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ವಿದ್ಯಾರ್ಥಿಗಳಾದ ಅನಿತಾ ಬೋಚನಳ್ಳಿ, ದಿವ್ಯಾ ಬಳಗೇರ, ಗುರಮ್ಮ ಬೋಚನಹಳ್ಳಿ, ನೇತ್ರಾವತಿನರಹಟ್ಟಿ, ಅಭಿಷೇಕ ಕಿನ್ನಾಳ, ವಿನಾಯಕ ರೊಟ್ಟಿಆಯ್ಕೆಯಾಗಿದ್ದಾರೆ.</p>.<p class="Subhead"><strong>ಲಾಕ್ಡೌನ್ನಲ್ಲಿ ನಿರಂತರಪರಿಶ್ರಮ: </strong>ಎನ್ಎಂಎಂಎಸ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಹಿಂದಿನ ವರ್ಷದಲ್ಲಿ ನಡೆದ ಪರೀಕ್ಷೆ ಪತ್ರಿಕೆಗಳನ್ನು ಇರಿಸಿಕೊಂಡು ಶಿಕ್ಷಕರು ಪಾಠಮಾಡುತ್ತಿದ್ದರು.</p>.<p>ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಳವಂಡಿ: </strong>ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಉದ್ದೇಶದಿಂದ ಎನ್ಸಿಇಆರ್ಟಿ ನಡೆಸಿದ ರಾಷ್ಟ್ರೀಯ ಪ್ರತಿಭಾ ಪುರಸ್ಕಾರ (ಎನ್ಎಂಎಂಎಸ್) ಪರೀಕ್ಷೆಯಲ್ಲಿ ಅಳವಂಡಿ ಸಮೀಪದ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಹಲವು ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಗಮನಸೆಳೆದಿದ್ದಾರೆ.</p>.<p class="Subhead"><strong>ನೀರಲಗಿ:</strong> ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ವಿದ್ಯಾರ್ಥಿಗಳು 2020-21ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆ ಹಿಂದೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಹೋಳಿಬಸಯ್ಯ ಅವರ ಶ್ರಮವಿದೆ.</p>.<p>ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ದಿನ ಸೇರಿದಂತೆ ಶನಿವಾರ ಮತ್ತು ಭಾನುವಾರವೂ ತರಗತಿಗಳನ್ನು ನಡೆಸಲಾಗಿದೆ.</p>.<p class="Subhead"><strong>ಆಯ್ಕೆಯಾದ ವಿದ್ಯಾರ್ಥಿಗಳು: </strong>ಆರ್.ಎಂ.ಶಿವುಕುಮಾರ, ಬಸವರಾಜ, ಪವಿತ್ರಾ ಐನಕ್ಕನರ, ಅಂಬಿಕಾ ಅಜ್ಜನವರ, ಪವನ ಕುಮಾರ ರಾಮನಗೌಡ, ಬಸವರಾಜ ದಡ್ಡಿನ, ಅನ್ನಪೂರ್ಣ ಯಲ್ಲಮ್ಮನವರ ಎನ್ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ.</p>.<p class="Subhead">ಮೈನಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ಬಸವರಾಜ ಚಿತ್ತಾಪುರ ಅವರ ಮಾರ್ಗದರ್ಶನದಿಂದ ಈ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಎನ್ಎಂಎಂಎಸ್ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದಾರೆ.</p>.<p>ಇದೇ ಶಾಲೆಯ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.</p>.<p>ಸ್ವಾತಿಕ ಕುರಡಗಿ (ಪ್ರಥಮ), ಸುಷ್ಮಿತಾ ಅಂಗಡಿ (ದ್ವಿತೀಯ), ಗವಿಸಿದ್ದಯ್ಯ ಕುರುವತ್ತಿಮಠ (ತೃತೀಯ) ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ವಿದ್ಯಾರ್ಥಿಗಳಾದ ಅನಿತಾ ಬೋಚನಳ್ಳಿ, ದಿವ್ಯಾ ಬಳಗೇರ, ಗುರಮ್ಮ ಬೋಚನಹಳ್ಳಿ, ನೇತ್ರಾವತಿನರಹಟ್ಟಿ, ಅಭಿಷೇಕ ಕಿನ್ನಾಳ, ವಿನಾಯಕ ರೊಟ್ಟಿಆಯ್ಕೆಯಾಗಿದ್ದಾರೆ.</p>.<p class="Subhead"><strong>ಲಾಕ್ಡೌನ್ನಲ್ಲಿ ನಿರಂತರಪರಿಶ್ರಮ: </strong>ಎನ್ಎಂಎಂಎಸ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಹಿಂದಿನ ವರ್ಷದಲ್ಲಿ ನಡೆದ ಪರೀಕ್ಷೆ ಪತ್ರಿಕೆಗಳನ್ನು ಇರಿಸಿಕೊಂಡು ಶಿಕ್ಷಕರು ಪಾಠಮಾಡುತ್ತಿದ್ದರು.</p>.<p>ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>