ಮಾಧ್ಯಮದ ಮುಂದೆ ಬೆತ್ತಲು ಮಾಡಲಿ ಎಂದು ಶಾಸಕ ಜನಾರ್ದನ ರೆಡ್ಡಿ ಸವಾಲಿಗೆ ಪ್ರತಿಕ್ರಿಯಿಸಿದ ತಂಗಡಗಿ, ಕಾಲ ಬಂದಾಗ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು. ಆದರೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಸಂಗಣ್ಣ ಅವರನ್ನು ಬೆಂಬಲಿಸಿದ್ದರು ಎಂದು ಶಾಸಕ ದೊಡ್ಡನಗೌಡ, ಜನಾರ್ದನ ರೆಡ್ಡಿ ಹೇಳಿಕೆಗೆ ತಂಗಡಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ‘ಬಾಯಿ ಚಪಲಕ್ಕೆ ರೆಡ್ಡಿ ಏನೇನೋ ಮಾತನಾಡುತ್ತಿದ್ದಾರೆ, ಜಿಲ್ಲೆಯ ಸ್ಥಿತಿಗತಿ ಏನೂ ಗೊತ್ತಿಲ್ಲ, ಜಿಲ್ಲೆಗೆ ಅವರ ಕೊಡುಗೆಯೂ ಇಲ್ಲ. ಒಂದಷ್ಟು ಮತ ತರುವ ಶಕ್ತಿಯೂ ಇಲ್ಲದ ರೆಡ್ಡಿ ಬಿಜೆಪಿಗೆ ಬಂದಿದ್ದಕ್ಕೆ ನಮ್ಮ ತಲೆ ಏಕೆ ಕೆಡಬೇಕು’ ಎಂದು ತಿರುಗೇಟು ನೀಡಿದರು. ಅಲ್ಲದೆ ಸುಳ್ಳು ಹೇಳುವುದರಲ್ಲಿ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮೀರಿಸುತ್ತಾರೆ ಎಂದು ಲೇವಡಿ ಮಾಡಿದರು.