ಗಂಗಾವತಿ: ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಕಾಯಲು ಹೋಗಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಬಂಡ್ರಾಳ ಗ್ರಾಮದ ಇಬ್ಬರ ಮೇಲೆ ಭಾನುವಾರ ಮಧ್ಯರಾತ್ರಿ ಕರಡಿ ದಾಳಿ ನಡೆಸಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಲ್ಲಪ್ಪ ಜಲ್ಲಿ (30), ದುರುಗಪ್ಪ ಜಲ್ಲಿ (60) ಗಾಯಗೊಂಡವರು. ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರಡಿ ದಾಳಿಯಿಂದ ಬಂಡ್ರಾಳ ಗ್ರಾಮ ಸೇರಿದಂತೆ ವೆಂಕಟಗಿರಿ ಹೋಬಳಿಯ ಗ್ರಾಮಗಳ ಜನರು ಅತಂಕಗೊಂಡಿದ್ದು, ಕರಡಿಯನ್ನು ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.