<p><strong>ಯಲಬುರ್ಗಾ: </strong>‘ವಚನ ಸಾಹಿತ್ಯ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದೆ’ ಎಂದು ಸಾಹಿತಿ ಶೇಖರಗೌಡ ಮಾಲಿಪಾಟೀಲ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸ್ಥಳೀಯ ಸಾಹಿತಿ ಮುಕ್ಕಾಲಪ್ಪ ನೆಲಜೇರಿ ಅವರ ಪತ್ನಿ ಲಿಂಗೈಕ್ಯ ಸಿದ್ಧಮ್ಮ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಲೋಕದ ಅಂಕು–ಡೊಂಕುಗಳನ್ನು ತಿದ್ದುವ ಕೆಲಸವನ್ನು ವಚನಗಳು ಮಾಡಿವೆ. 12ನೇ ಶತಮಾನದ ಬಹುತೇಕ ಶರಣರು ತಮ್ಮ ವಿಚಾರಧಾರೆಗಳನ್ನು ವಚನಗಳ ಮೂಲಕವೇ ಅಭಿವ್ಯಕ್ತಪಡಿಸುತ್ತಿದ್ದರು. ಇಂದಿಗೂ ಪ್ರಸ್ತುತವಾಗಿರುವ ಅಸಂಖ್ಯಾತ ವಚನಗಳ ತಾತ್ಪರ್ಯ ಪ್ರತಿಯೊಬ್ಬರಿಗೂ ದಾರಿದೀಪವಾಗಲಿವೆ ಎಂದರು.</p>.<p>ಅತಿಥಿಯಾಗಿ ಭಾಗವಹಿಸಿದ್ದ ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಬಧ್ರಪ್ಪ ಕುರುಕುಂದಿ ಮಾತನಾಡಿ,‘ಅನೇಕ ಶರಣರ ವಚನಗಳು ಅಪೂರ್ಣಗೊಂಡಿವೆ. ಅಲ್ಲದೆ, ಮತ್ತೆ ಕೆಲ ಶರಣರ ವಚನಗಳು ದಾಖಲಾಗದೇ ಅವರಿವರ ಹೆಸರಲ್ಲಿ ಬೆಳಕಿಗೆ ಬರುತ್ತಿವೆ. ಸಂಶೋಧನೆಯ ಮೂಲಕ ವಚನಗಳ ಮೂಲ ಪತ್ತೆ ಮಾಡಬೇಕಾಗಿದೆ’ ಎಂದು ನುಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ತಿಮ್ಮನಗೌಡ ಚಿಲ್ಕರಾಗಿ, ಗಣ್ಯರಾದ ತೇಜನಗೌಡ ಪಾಟೀಲ, ಬಸವರಾಜ ಇಂಗಳದಾಳ, ಅಮರೇಶ ಗುಡಿಹಳ್ಳಿ, ಅಂದಪ್ಪ ಮಂಡಲಗೇರಿ, ವೀರಣ್ಣ ನಿಂಗೋಜಿ, ಕೊಟ್ರಪ್ಪ ಮುತ್ತಾಳ, ಹನಮಂತಪ್ಪ ಜಳಕಿ ಹಾಗೂ ಮಹದೇವಪ್ಪ ಗೊರೆಬಾಳ ಮಾತನಾಡಿದರು.</p>.<p>ಪ್ರಭುಗೌಡ ಪಾಟೀಲ, ಲೋಕೇಶ ನಾಯಕ, ರುದ್ರಪ್ಪ ಹಳ್ಳಿ, ಶ್ರೀಕಾಂತಗೌಡ ಮಾಲಿಪಾಟೀಲ, ಮುದಿಯಪ್ಪ ಮೇಟಿ, ಗನ್ನೆಪ್ಪ ಚನ್ನದಾಸರ ಇದ್ದರು, ವಿವಿಧ ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಉಮಾದೇವಿ ಪಾಟೀಲ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಬುರ್ಗಾ: </strong>‘ವಚನ ಸಾಹಿತ್ಯ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದೆ’ ಎಂದು ಸಾಹಿತಿ ಶೇಖರಗೌಡ ಮಾಲಿಪಾಟೀಲ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸ್ಥಳೀಯ ಸಾಹಿತಿ ಮುಕ್ಕಾಲಪ್ಪ ನೆಲಜೇರಿ ಅವರ ಪತ್ನಿ ಲಿಂಗೈಕ್ಯ ಸಿದ್ಧಮ್ಮ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಲೋಕದ ಅಂಕು–ಡೊಂಕುಗಳನ್ನು ತಿದ್ದುವ ಕೆಲಸವನ್ನು ವಚನಗಳು ಮಾಡಿವೆ. 12ನೇ ಶತಮಾನದ ಬಹುತೇಕ ಶರಣರು ತಮ್ಮ ವಿಚಾರಧಾರೆಗಳನ್ನು ವಚನಗಳ ಮೂಲಕವೇ ಅಭಿವ್ಯಕ್ತಪಡಿಸುತ್ತಿದ್ದರು. ಇಂದಿಗೂ ಪ್ರಸ್ತುತವಾಗಿರುವ ಅಸಂಖ್ಯಾತ ವಚನಗಳ ತಾತ್ಪರ್ಯ ಪ್ರತಿಯೊಬ್ಬರಿಗೂ ದಾರಿದೀಪವಾಗಲಿವೆ ಎಂದರು.</p>.<p>ಅತಿಥಿಯಾಗಿ ಭಾಗವಹಿಸಿದ್ದ ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಬಧ್ರಪ್ಪ ಕುರುಕುಂದಿ ಮಾತನಾಡಿ,‘ಅನೇಕ ಶರಣರ ವಚನಗಳು ಅಪೂರ್ಣಗೊಂಡಿವೆ. ಅಲ್ಲದೆ, ಮತ್ತೆ ಕೆಲ ಶರಣರ ವಚನಗಳು ದಾಖಲಾಗದೇ ಅವರಿವರ ಹೆಸರಲ್ಲಿ ಬೆಳಕಿಗೆ ಬರುತ್ತಿವೆ. ಸಂಶೋಧನೆಯ ಮೂಲಕ ವಚನಗಳ ಮೂಲ ಪತ್ತೆ ಮಾಡಬೇಕಾಗಿದೆ’ ಎಂದು ನುಡಿದರು.</p>.<p>ಅಧ್ಯಕ್ಷತೆ ವಹಿಸಿದ್ದ ತಿಮ್ಮನಗೌಡ ಚಿಲ್ಕರಾಗಿ, ಗಣ್ಯರಾದ ತೇಜನಗೌಡ ಪಾಟೀಲ, ಬಸವರಾಜ ಇಂಗಳದಾಳ, ಅಮರೇಶ ಗುಡಿಹಳ್ಳಿ, ಅಂದಪ್ಪ ಮಂಡಲಗೇರಿ, ವೀರಣ್ಣ ನಿಂಗೋಜಿ, ಕೊಟ್ರಪ್ಪ ಮುತ್ತಾಳ, ಹನಮಂತಪ್ಪ ಜಳಕಿ ಹಾಗೂ ಮಹದೇವಪ್ಪ ಗೊರೆಬಾಳ ಮಾತನಾಡಿದರು.</p>.<p>ಪ್ರಭುಗೌಡ ಪಾಟೀಲ, ಲೋಕೇಶ ನಾಯಕ, ರುದ್ರಪ್ಪ ಹಳ್ಳಿ, ಶ್ರೀಕಾಂತಗೌಡ ಮಾಲಿಪಾಟೀಲ, ಮುದಿಯಪ್ಪ ಮೇಟಿ, ಗನ್ನೆಪ್ಪ ಚನ್ನದಾಸರ ಇದ್ದರು, ವಿವಿಧ ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಉಮಾದೇವಿ ಪಾಟೀಲ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>